Advertisement

ಕುಷ್ಟಗಿ: ಬೈಕ್ ಸೀಟಿನೊಳಗೆ ಅವಿತುಕೊಂಡ ಹಾವನ್ನು ಹೊಡೆದು ಕೊಂದ ಜನ

12:35 PM Nov 22, 2021 | Team Udayavani |

ಕುಷ್ಟಗಿ:  ಆಕಸ್ಮಿಕವಾಗಿ ಬೈಕಿನ ಸೀಟಿನೊಳಗೆ ಅವಿತು ಕುಳಿತ ಹಾವನ್ನು ಸಾಯಿಸಿದ ಘಟನೆ ನಡೆದಿದೆ.

Advertisement

ಇಲ್ಲಿನ ಮಾರುತಿ ವೃತ್ತದ ಮೂಲಕ ಕಾರಟಗಿಯ ವಕೀಲ ಉಮೇಶ ಹಿರೇಮನಿ ತಾಳಕೇರಿ ಬೈಕಿನಲ್ಲಿ ಹೊರಟಿದ್ದಾಗ, ಹಾವಿನ ಮರಿ ಚಲಿಸುವ ಬೈಕಿನ ಸೀಟು ಸೇರಿಕೊಂಡಿತ್ತು. ಗಾಬರಿಯಿಂದ ಬೈಕಿನಿಂದ ಇಳಿದು ನೋಡಿದಾಗ ಹಾವು ಮರಿ ಸೀಟಿನೊಳಗಿರುವುದು ಕಂಡು ಬಂದಿದೆ.

ಜನರು ಸೇರಿ ಹಾವನ್ನು ಹೊರಗೆಡವಲು ಯತ್ನಿಸಿ, ಎಷ್ಟೇ ಸದ್ದು ಮಾಡಿದರೂ, ಹಾವು ಹೊರಬರಲಿಲ್ಲ. ನಂತರ ಬೈಕ್ ಸೀಟು ತೆಗೆದಾಗ ಮರಿಹಾವು ಹೆದರಿ ಮತ್ತೆ ಒಳಗೆ ಹೋಗಲು ಯತ್ನಿಸಿದ ವೇಳೆ, ಸೇರಿದ್ದ ಜನ ಕಟ್ಟಿಗೆಯಿಂದ ಚುಚ್ಚಲಾರಂಭಿಸಿದಾಗ ಹಾವು ಹೊರಗೆ ಬಂದಾಗ ಕೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next