Advertisement

Koppa: ಸಂಬಳದ ಹಣ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಯುವಕನಿಗೆ ಹಲ್ಲೆ

11:50 PM Feb 04, 2024 | Team Udayavani |

ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಮರಕ್ಕೆ ಕಟ್ಟಿ ಮರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕೊಪ್ಪ ತಾಲೂಕು ಸೋಮಲಾಪುರದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

Advertisement

ಸತೀಶ್‌ ಹಲ್ಲೆಗೊಳಗಾದವರು. ಇವರು ಕೊಪ್ಪ ಮೂಲದ ಮಂಜು ಎಂಬವರ ಬೆಂಗಳೂರಿನಲ್ಲಿರುವ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸಂಬಳದ ವಿಚಾರವಾಗಿ ಮಂಜು ಮತ್ತು ಸತೀಶ್‌ ನಡುವೆ ಗಲಾಟೆಯಾಗಿ ಕೆಲಸ ಬಿಟ್ಟು ಊರಿಗೆ ಬಂದಿದ್ದ. ಸಂಬಳ ನೀಡುವಂತೆ ಸತೀಶ್‌ ಪದೇಪದೆ ಮಂಜುಗೆ ದೂರವಾಣಿ ಕರೆ ಮಾಡುತ್ತಿದ್ದ. ಮಂಜು ಈ ವಿಚಾರವನ್ನು ಸಹೋದರನಿಗೆ ತಿಳಿಸಿದ್ದು, ಮಂಜು ಸಹೋದರ ಹಾಗೂ ಸ್ನೇಹಿತರು ಸೇರಿಕೊಂಡು ಸತೀಶ್‌ನನ್ನು ಕರೆಸಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಸತೀಶ್‌ ಕೊಪ್ಪದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,
ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next