Advertisement

ಪ್ರಧಾನಿ ನರೇಂದ್ರ ಮೋದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಪ್ರಸಾದ

09:07 AM Aug 22, 2019 | Nagendra Trasi |

ಕೊಲ್ಲೂರು: ದೈವೇಚ್ಛೆಯಿದ್ದರೆ ಖಂಡಿತ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುತ್ತೇನೆ. ದೇಶಕ್ಕೆ ಒಳ್ಳೆಯದಾಗಲಿ ಎಂಬ ಪ್ರಾರ್ಥನೆಯೊಂದಿಗೆ ತಾಯಿಯ ಪ್ರಸಾದ ಭಕ್ತಿಯಿಂದ ಸ್ವೀಕರಿಸುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ಅವರ ಕೋರಿಯಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಚಂಡಿಕಾ ಹೋಮ ಸಹಿತ ಮಹಾ ಪೂಜೆ ನಡೆಸಿ ದೆಹಲಿಗೆ ತೆರಳಿದ ಕೊಲ್ಲೂರು ದೇಗುಲದ ಅರ್ಚಕ ಡಾ| ಕೆ.ಎನ್‌ ನರಸಿಂಹ ಅಡಿಗ, ಕೆ.ಎನ್‌ ಸುಬ್ರಹ್ಮಣ್ಯ ಅಡಿಗ ಹಾಗೂ ಕೆ.ಎನ್‌ ಪರಮೇಶ್ವರ ಅಡಿಗ ಅವರು ಪ್ರಧಾನಿಯವರ ನಿವಾಸಕ್ಕೆ ತೆರಳಿ ಪ್ರಸಾದ ನೀಡಿದಾಗ ಕ್ಷೇತ್ರ ಮಹತ್ವವನ್ನು ತಿಳಿದರು. ಜತೆಗೆ ಚುನಾವಣೆ ಸಂದರ್ಭ ಮಂಗಳೂರು, ಉಡುಪಿಗೆ ಬಂದಿರುವುದನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next