Advertisement

ಸಿದ್ದು ಸ್ಪರ್ಧೆಯ ಕೋಲಾರ ಕ್ಷೇತ್ರಕ್ಕೆ ಗೋವಿಂದಗೌಡ, ಸುದರ್ಶನ್‌ ಆಕಾಂಕ್ಷಿಗಳು

10:00 PM Nov 14, 2022 | Team Udayavani |

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಭರ್ಜರಿ ರೋಡ್‌ ಶೋ ನಡೆಸಿರುವ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

Advertisement

ಕಾಂಗ್ರೆಸ್‌ ಟಿಕೆಟ್‌ ಬಯಸಿ ಕೆಪಿಸಿಸಿ ಕಚೇರಿಯಿಂದ ಬ್ಯಾಲಹಳ್ಳಿ ಗೋವಿಂದಗೌಡ, ವಿ.ಆರ್‌.ಸುದರ್ಶನ್‌ ಅರ್ಜಿ ಪಡೆದಿದ್ದು, ಗೋವಿಂದಗೌಡರು ಎರಡು ಲಕ್ಷ ರೂ. ಡಿಡಿಯೊಂದಿಗೆ ಅರ್ಜಿ ಭರ್ತಿ ಮಾಡಿ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ಸ್ಪರ್ಧೆಗೆ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ತಂಡ ಪ್ರಯತ್ನದ ನಡುವೆಯೇ ಆಕಾಂಕ್ಷಿಗಳು ಅರ್ಜಿ ಪಡೆದಿರುವುದು ಹಾಗೂ ಪ್ರಬಲ ಆಕಾಂಕ್ಷಿ ಗೋವಿಂದಗೌಡರು ಅರ್ಜಿ ಭರ್ತಿ ಮಾಡಿ ಕೊಟ್ಟಿರುವುದು ಕುತೂಹಲ ಮೂಡಿಸಿದೆ.

ಭರ್ಜರಿ ಬೇಡಿಕೆ: ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಪಡೆಯಲು ಮಂಗಳವಾರ ಕಡೇ ದಿನಾಂಕವಾಗಿದ್ದು ಸೋಮವಾರ ಅರ್ಜಿಗಾಗಿ ಭರ್ಜರಿ ಬೇಡಿಕೆ ಉಂಟಾಗಿತ್ತು. ಕೆಪಿಸಿಸಿ ಕಚೇರಿ ಆಕಾಂಕ್ಷಿಗಳಿಂದ ತುಂಬಿ ತುಳುಕಾಡುತ್ತಿತ್ತು.
ಈ ಮಧ್ಯೆ, ವರುಣಾ, ಕನಕಪುರ ಸೇರಿ ಇನ್ನೂ ಹಲವು ಕ್ಷೇತ್ರಗಳಿಗೆ ಯಾರೂ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ, ಅರ್ಜಿ ಪಡೆಯುವ ದಿನಾಂಕ ವಿಸ್ತರಣೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಳೆದ ಬಾರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಿಂದ ಅವರ ಆಪ್ತ ಮರಿಗೌಡ ಅರ್ಜಿ ಪಡೆದಿದ್ದಾರೆ.

Advertisement

ರಾಮನಗರದಿಂದ ಇಕ್ಬಾಲ್‌ ಹುಸೇನ್‌ ಆರ್ಜಿ ಪಡೆದಿದ್ದಾರೆ. ಸೋಮವಾರದವರೆಗೆ 800 ಅರ್ಜಿ ಪಡೆದಿದ್ದು 548 ಅರ್ಜಿ ಭರ್ತಿ ಮಾಡಿ ಡಿಡಿ ಸಮೇತ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಾಲಿ ಶಾಸಕರು ಅರ್ಜಿ ಭರ್ತಿ ಮಾಡಿ ಕೊಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next