Advertisement
ಸ್ವಂತ ಅನುದಾನದಲ್ಲಿ ದುರಸ್ತಿಕೊಯಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಾಳು ಬಿದ್ದಿದ್ದ 4 ಬಾವಿಗಳನ್ನು ದುರಸ್ತಿ ಮಾಡಿ ಸಂಭವನೀಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗಂಡಿಬಾಗಿಲು, ಗೋಕುಲ ನಗರ, ವಳಕಡಮ ಮತ್ತು ಸಬಲೂರು ಸಹಿತ 4 ಕಡೆಗಳಲ್ಲಿ ತೆರೆದ ಬಾವಿಗಳಿವೆ. ಇವುಗಳಲ್ಲಿ ನೀರಿದ್ದರೂ ಬಳಸಲಾಗದ ಸ್ಥಿತಿಯಿತ್ತು. ಹೂಳು ತುಂಬಿದ್ದ ಕಾರಣ ಅವು ಪಾಳು ಬಿದ್ದಿದ್ದವು. ಇನ್ನೂ ಕೆಲವರು ಈ ಬಾವಿಗಳಿಗೆ ತ್ಯಾಜ್ಯ ಎಸೆದು, ನೀರನ್ನು ಮಲಿನಗೊಳಿಸಿದ್ದರಿಂದ ಅದನ್ನು ಕುಡಿಯಲು ಅಥವಾ ದಿನಬಳಕೆಗೆ ಪಡೆಯದಂತಹ ಸ್ಥಿತಿ ಉಂಟಾಗಿತ್ತು.
ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದ ಬಾವಿಯನ್ನು ದುರಸ್ತಿ ಮಾಡುವ ಮೂಲಕ ಬಿರು ಬೇಸಿಗೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಮಸ್ಯೆಯನ್ನು ಎದುರಾಗಬಾರದೆಂದು ಗ್ರಾ.ಪಂ. ಕೈಗೊಂಡಿರುವ ಬಾವಿ ದುರಸ್ತಿ ಕ್ರಮದ ಬಗ್ಗೆ ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ.
Related Articles
ವರ್ಷಂಪ್ರತಿ ಬೇಸಗೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿಗೆ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಅರ್ಥೈಸಿಕೊಂಡು ಅಂತಹ ಸಮಸ್ಯೆ ಎದುರಾದಾಗ ಕನಿಷ್ಠ ನೀರಿನ ಸಲುವಾಗಿಯಾದರೂ ನೀರು ಸೇದಿ ತಂದು ತುರ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬಾವಿಯನ್ನು ಸುಸ್ಥಿತಿಯಲ್ಲಿ ಇಟ್ಟು ಕೊಳ್ಳಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕಾರ್ಮಿಕರು ಸಿಗದೆ ತಡವಾಗಿತ್ತು. ಇದೀಗ ಬಾವಿಗಳನ್ನು ದುರಸ್ತಿ ಮಾಡಲು ಸಾಧ್ಯವಾಗಿದೆ.
– ಹೇಮಾ ಮೋಹನ್ದಾಸ್, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ
Advertisement
ಸದಾನಂದ ಆಲಂಕಾರು