Advertisement

ನರೋಡಾ ಕೇಸು: ಕೊಡ್ನಾನಿ ಖುಲಾಸೆ

07:00 AM Apr 21, 2018 | Team Udayavani |

ಅಹಮದಾಬಾದ್‌: ನರೋಡಾ ಪಾಟಿಯಾ ಹತ್ಯಾಕಾಂಡದ ಪ್ರಮುಖ ರೂವಾರಿ ಎಂಬ ಆರೋಪಕ್ಕೆ ಗುರಿಯಾಗಿದ್ದ ಬಿಜೆಪಿ ನಾಯಕಿ, ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಗುಜರಾತ್‌ ಹೈಕೋರ್ಟ್‌ ಖುಲಾಸೆಗೊಳಿಸಿದೆ. ಇದೇ ಪ್ರಕರಣದಲ್ಲಿ ಬಜರಂಗ ದಳದ ನಾಯಕ ಬಾಬು ಬಜರಂಗಿ ಅಲಿಯಾಸ್‌ ಬಾಬುಭಾಯ್‌ ಪಟೇಲ್‌ಗೆ ನೀಡಲಾಗಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ. 

Advertisement

ಜತೆಗೆ ಕೊಡ್ನಾನಿ ಅವರ ಆಪ್ತ ಸಹಾಯಕ ಕೃಪಾಲ್‌ ಸಿಂಗ್‌ ಛಬಾರನ್ನು ದೋಷಮುಕ್ತಗೊಳಿಸಲಾಗಿದ್ದರೆ, ಮತ್ತೂಬ್ಬ ಸ್ಥಳೀಯ ನಾಯಕ ಸುರೇಶ್‌ ಲಂಗಾಡೋ ಅಲಿಯಾಸ್‌ ರಿಚರ್ಡ್‌ ಛರಾ ಮತ್ತು ಪ್ರಕಾಶ್‌ ರಾಥೋಡ್‌ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌  21 ವರ್ಷಕ್ಕೆ ಇಳಿಸಿದೆ. ನ್ಯಾ| ಹರ್ಷ ದೇವಾನಿ ಮತ್ತು ನ್ಯಾ| ಎ. ಎಸ್‌. ಸುಪೇಹಿಯಾ ಅವರನ್ನೊಳ ಗೊಂಡ ಗುಜರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ.

ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ 29 ಮಂದಿಯ ಪೈಕಿ 12 ಮಂದಿಗೆ ನೀಡಲಾಗಿದ್ದ ಶಿಕ್ಷೆಯನ್ನು ನ್ಯಾಯಪೀಠ ಎತ್ತಿಹಿಡಿದಿದೆ. ಮಾಜಿ ಸಚಿವೆ ಕೊಡ್ನಾನಿ ಸಹಿತ 17 ಮಂದಿಯನ್ನು ದೋಷಮುಕ್ತಿ ಗೊಳಿಸಲಾಗಿದೆ.

ಏನಿದು ಪ್ರಕರಣ?: 2007ರ ಫೆ.27 ರಂದು ಸಾಬರಮತಿ ಎಕ್ಸ್‌ಪ್ರೆಸ್‌ನಲ್ಲಿ 57 ಮಂದಿ ಕರಸೇವಕರ ಹತ್ಯೆಯಾದ ಬಳಿಕ 2007ರ ಫೆ.28ರಂದು ಅಹಮದಾ ಬಾದ್‌ ಸಮೀಪದ ನರೋಡಾ ಗಮ್‌ನಿಂದ 2 ಕಿ.ಮೀ. ದೂರದ ನರೋಡಾ ಪಾಟಿಯಾ ಎಂಬ ಸ್ಥಳದಲ್ಲಿ 97 ಮಂದಿ ಯನ್ನು ಕೊಲ್ಲಲಾಗಿತ್ತು. ಈ ಪ್ರಕರಣದ ಪ್ರಮುಖ ರೂವಾರಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next