Advertisement

ಸಮಾಜದ ಒಳಿತಿಗೆ ಜ್ಞಾನ ಬಳಕೆಯಾಗಲಿ

05:27 PM Mar 23, 2022 | Shwetha M |

ಇಂಡಿ: ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಬಿಜೆಪಿ ಮುಖಂಡ ಯಲ್ಲಪ್ಪ ಹದರಿ ಹೇಳಿದರು.

Advertisement

ತಾಲೂಕಿನ ಸಾತಪುರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥವಿಕ ಶಾಲೆಯಲ್ಲಿ ನಡೆದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಪ್ರಾಮುಖ್ಯವೆಂದು ವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ತಮ್ಮದೇ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿ ಶುಭನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಶೈಲ ರೂಗಿ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ಶಾಲಾ ಮುಖ್ಯ ಗುರು ಶಿವಾನಂದ ಕೊಳಿ, ಪದ್ಮಣ್ಣ ರೂಗಿ, ಮಾಳಪ್ಪ ಗುಡ್ಲ, ಭೀರಪ್ಪ ಕತ್ನಳ್ಳಿ, ಪಾಂಡು ಗುಡ್ಲ, ಮಾಜಿ ಸೈನಿಕ ಲಾಯಪ್ಪ ಗೂಗದಡ್ಡಿ, ರವತಪ್ಪ ಬೇನೂರ, ಸಿದ್ದಪ್ಪ ಗುಡ್ಲ, ಮಲಕ್ಕಪ್ಪ ಮಾಶ್ಯಾಳ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next