Advertisement

ದ್ರಾವಿಡ್‌ ಸರ್‌ ಜತೆ ಕೆಲಸ ಮಾಡಲು ಕಾತರ: ಕೆ.ಎಲ್‌. ರಾಹುಲ್‌

08:05 PM Nov 16, 2021 | Team Udayavani |

ಜೈಪುರ: ಟೀಮ್‌ ಇಂಡಿಯಾದ ನೂತನ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ವೈಯಕ್ತಿಕ ಗುರಿ ಸಾಧನೆಗಿಂತ ತಂಡದ ಸಾಂ ಕ ಹೋರಾಟಕ್ಕೆ ಹೆಚ್ಚು ಗಮನ ಹರಿಸಲಿದ್ದಾರೆ ಎಂದು ಭಾರತ ಟಿ20 ತಂಡದ ಉಪನಾಯಕ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ.

Advertisement

ಬುಧವಾರದಿಂದ ಕಿವೀಸ್‌ ವಿರುದ್ಧ ಆರಂಭವಾಗಲಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌, “ಇಂಡಿಯಾ “ಎ’ ತಂಡದಲ್ಲಿ ದ್ರಾವಿಡ್‌ ಕೋಚ್‌ ಆಗಿದ್ದಾಗ ಕೆಲ ಪಂದ್ಯಗಳು ಆಡಿದ್ದೇನೆ. ಅವರು ಯಾವಾಗಲೂ ತಂಡದ ಒಬ್ಬ ಸದಸ್ಯರಾಗಿರುತ್ತಿದ್ದರು. ವೈಯಕ್ತಿಕ ಸಾಧನೆಗಿಂತ ತಂಡದ ಸಾಂ ಕ ಹೋರಾಟ ಮುಖ್ಯವೆಂಬ ವಾತಾವರಣವನ್ನು ನಿರ್ಮಿಸಿದ್ದರು. ಅವರು ಬಹಳ ಸೌಜನ್ಯದ ವ್ಯಕ್ತಿಯಾಗಿದ್ದು, ಕರ್ನಾಟಕ ತಂಡದಲ್ಲಿದ್ದ ನಮ್ಮೆಲ್ಲರಿಗೂ ಬಹಳ ನೆರವಾಗಿದ್ದಾರೆ’ ಎಂದರು.

ಇದನ್ನೂ ಓದಿ:ಕೂಲಿ ಕಾರ್ಮಿಕರಿದ್ದ ಕ್ರೂಸರ್ ವಾಹನ ಪಲ್ಟಿ, ಓರ್ವ ಮಹಿಳೆ ಸಾವು : ಮೂವರು ಗಂಭೀರ

“ಉತ್ತಮ ಕ್ರಿಕೆಟಿಗರಾಗಿ ನಮ್ಮನ್ನು ನಾವು ರೂಪಿಸಿಕೊಳ್ಳಲು ಹಾಗೂ ಕ್ರಿಕೆಟ್‌ ಎಂದರೆ ಏನು ಎಂಬುದನ್ನು ಇನ್ನಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶ’ ಎಂದು ರಾಹುಲ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next