Advertisement

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 31 ದಿನಗಳಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?

06:07 PM Dec 29, 2022 | Team Udayavani |

ಗಂಗಾವತಿ: ಶ್ರೀ ಆಂಜನೇಯ ದೇವಸ್ಥಾನ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದಲ್ಲಿ ಗ್ರೇಡ್ 2 ತಹಶೀಲ್ದಾರ್ ಗುರುವಾರ ವಿ.ಹೆಚ್.ಹೊರಪೇಟೆ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. 31 ದಿನಗಳ ಅವಧಿಯಲ್ಲಿ ಒಟ್ಟು 26,33,972 ರೂ ಗಳು ಸಂಗ್ರಹವಾಗಿರುತ್ತದೆ. ಹಾಗೂ ವಿವಿಧ ದೇಶಗಳ 6 ವಿದೇಶಿ ನಾಣ್ಯಗಳು ಸಂಗ್ರಹವಾಗಿದೆ.

Advertisement

ಈ ಸಂದರ್ಭದಲ್ಲಿ ಶಿರಸ್ತೇದಾರಾದ ಅನಂತ ಜೋಶಿ, ರವಿಕುಮಾರ ನಾಯಕ್ವಾಡಿ ,ಮೈಬೂಬಅಲಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಹಾಗೂ ತಹಶೀಲ್ ಕಾರ್ಯಾಲಯದ ಸಿಬಂದಿಗಳಾದ ಗುರುರಾಜ, ಶ್ರೀಕಂಠ, ಇಂದಿರಾ, ಮಂಜುನಾಥ, ನಾಗರತ್ನ, ಕವಿತಾ, ಸೌಭಾಗ್ಯ, ಎಸ್ ಕವಿತಾ, ಶಿವಕುಮಾರ್, ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ,ಅಭಿಷೇಕ, ಪೂಜಾ, ಮಹಾಲಕ್ಷ್ಮೀ,ಕಾವ್ಯ, ಹಾಗೂ ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬಂದಿಗಳಾದ ಯಶ್ವಂತ್, ಸುನಿಲ್ , ಪೋಲಿಸ್ ಸಿಬಂದಿ ಅಂಜಿನಪ್ಪ,ದೇವಾಲಯ ಕಮಿಟಿ ಮ್ಯಾನೇಜರ್ ಎಂ. ವೆಂಕಟೇಶ ದೇವಸ್ಥಾನದ ಸಿಬಂದಿವರ್ಗ ಹಾಗೂ ಭಕ್ತಾದಿಗಳಿದ್ದರು.

ಹುಂಡಿ ಎಣಿಕೆ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೋಬಸ್ತ್ ಕ್ಯಾಮರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು. ಈ ಹಿಂದೆ ನ. 28 ರಂದು ಹುಂಡಿ ತೆರೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next