Advertisement

ಕಿಷ್ಕಿಂದಾ ಅಂಜನಾದ್ರಿ ಕಾಣಿಕೆ ಹುಂಡಿ ಎಣಿಕೆ:  23.50 ಲಕ್ಷ ರೂ. ಸಂಗ್ರಹ

07:25 PM Nov 30, 2021 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನದ ಭಕ್ತರ ಕಾಣಿಕೆ ಹುಂಡಿಯ ಎಣಿಕೆ ಕಾರ್ಯವನ್ನು ಮಂಗಳವಾರ ನಡೆಸಲಾಯಿತು .

Advertisement

ಕಳೆದ ಸೆಪ್ಟೆಂಬರ್ 11 ರಂದು ಕಾಣಿಕೆ ಪೆಟ್ಟಿಗೆ ಎಣಿಕೆಯನ್ನು  ಮಾಡಲಾಗಿತ್ತು .3 ತಿಂಗಳ ನಂತರ ಇದೀಗ ಕಾಣಿಕೆ ಹುಂಡಿಯನ್ನು ಎಣಿಕೆ ಮಾಡಲಾಗಿದ್ದು 23.50 ಲಕ್ಷ ರೂ.ಸಂಗ್ರಹವಾಗಿದೆ.

ಸಿಸಿ ಕ್ಯಾಮೆರಾ ಹಾಗೂ ಪೊಲೀಸ್ ಕಣ್ಗಾವಲಿನಲ್ಲಿ  ಸಾಣಾಪುರ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ದೇಗುಲಕ್ಕೆ ಬಂದ ಭಕ್ತರು ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮಾಡಿದರು.

ತಹಸೀಲ್ದಾರ್ ಯು. ನಾಗರಾಜ ಗ್ರೇಡ್ -2 ತಹಸಿಲ್ದಾರ್ ವಿ .ಎಚ್ ಹೊರಪೇಟೆ,ಆರ್ ಐ ಮಂಜುನಾಥ ಹಿರೇಮಠ,ವ್ಯವಸ್ಥಾಪಕ ಎಂ ವೆಂಕಟೇಶ್, ಶಿರಸ್ತೆದಾರರಾದ  ಅನಂತ್ ಜೋಶಿ, ಕೃಷ್ಣವೇಣಿ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next