Advertisement

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಜಾರಿ

07:07 AM Jun 20, 2020 | Lakshmi GovindaRaj |

ಮುಳಬಾಗಿಲು: ಕೇಂದ್ರ ಸರ್ಕಾರ ಹೈನುಗಾರಿಕೆ ಅಭಿವೃದ್ಧಿಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಜಾರಿಗೆ ತಂದಿದ್ದು, ಹಾಲು ಉತ್ಪಾದಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋಚಿಮುಲ್‌ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್‌ ಸಲಹೆ  ನೀಡಿದರು. ನಗರದ ಕೋಚಿಮುಲ್‌ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ಕೋವಿಡ್‌ 19ದಿಂದ ದೇಶವೇ ತತ್ತರಿಸುತ್ತಿದೆ, ಈ ಒಂದು ಸಂದರ್ಭದಲ್ಲಿ ರೈತರ ಕೈ ಹಿಡಿದಿರುವ ಹೈನುಗಾರಿಕೆಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕೃಷಿಗಷ್ಟೇ ಅಲ್ಲ, ಹೈನುಗಾರಿಕೆಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸುತ್ತಿದೆ ಎಂದು ಹೇಳಿದರು.ಕೋವಿಡ್‌ 19 ಸಂಕಷ್ಟ ಕಾಲ ದಲ್ಲಿ  ಖಾಸಗಿ ಡೇರಿಗಳು ರೈತರಿಂದ ಹಾಲು ಸ್ವೀಕರಿಸುತ್ತಿಲ್ಲ.

ಆದರೆ, ಕೋಚಿ ಮುಲ್‌ ಕಂಟೇನ್‌ಮೆಂಟ್‌ ಜೋನ್‌ಗಳಲ್ಲೂ ಹಾಲು ಸ್ವೀಕರಿಸಿ ಹಣ ಬಟವಾಡೆ ಮಾಡಿ ರೈತರ ಪರ ನಿಂತಿದೆ. ಆದ್ದರಿಂದ, ಹಸು ಹೊಂದಿರುವ ರೈತರು ಸಂಘದಲ್ಲಿ  ಹೆಸರು ನೋಂದಾಯಿಸಿಕೊಳ್ಳಿ, ಇದರಿಂದ ವಾರ್ಷಿಕ 2 ಲಕ್ಷ ರೂ.ವರೆಗೂ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದೆ ಎಂದು ಹೇಳಿದರು. ಉಪ ವ್ಯವಸ್ಥಾಪಕ ಶ್ರೀಧರ್‌ಮೂರ್ತಿ, ವಿಸ್ತರಣಾಧಿ ಕಾರಿ ಶ್ರೀರಾಮ್‌, ಕೃಷ್ಣಪ್ಪ, ಆನಂದ್‌,  ಎಂ.ರವಿ ಕುಮಾರ್‌, ಶ್ರೀನಿವಾಸ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next