Advertisement

ಕಿರಿಮಂಜೇಶ್ವರ: ಕಾರು ಪಲ್ಟಿ; 5 ಮಂದಿಗೆ ಗಾಯ

01:21 AM Jun 01, 2022 | Team Udayavani |

ಉಪ್ಪುಂದ : ಔತಣಕೂಟಕ್ಕೆ ಹೋಗಿ ಬರುತ್ತಿರುವಾಗ ಕಾರು ಸೂಚನಾಫ‌ಲಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿ 5 ಮಂದಿ ಗಾಯಗೊಂಡ ಘಟನೆ ಮೇ 29ರಂದು ತಡರಾತ್ರಿ ಕಿರಿಮಂಜೇಶ್ವರ ರಾ.ಹೆ. 66ರಲ್ಲಿ ಸಂಭವಿಸಿದೆ.

Advertisement

ನಾವುಂದ ಗ್ರಾಮದ ಗರಡಿಬೆಟ್ಟು ನಿವಾಸಿ ಸುರೇಶ ಪೂಜಾರಿ ಅವರು ಮೂಲ್ಕಿಯಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ಹೆಂಡತಿ ಜಯಲಕ್ಷ್ಮೀ, ಮಾವ ರಾಮ ಪೂಜಾರಿ, ಭಾವ ಕಿಶೋರ್‌ ಹಾಗೂ ಕಿಶೋರ್‌ ಅವರ ಪತ್ನಿ ಅನುಷಾ ಅವರೊಂದಿಗೆ ಕಾರಿನಲ್ಲಿ ಹೋಗಿದ್ದು ವಾಪಸು ಬೈಂದೂರಿಗೆ ಹಿಂದಿರುಗುವಾಗ ರಾತ್ರಿ 11.30 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಶಾಲೆಬಾಗಿಲು ಎಂಬಲ್ಲಿನ ಆದ್ರಗೋಳಿ ಕ್ರಾಸ್‌ ಬಳಿ ರಸ್ತೆಗೆ ಓಡಿಬಂದ ದನವನ್ನು ತಪ್ಪಿಸುವ ಸಲುವಾಗಿ ಚಾಲಕ ಕಾರನ್ನು ಎಡಕ್ಕೆ ತಿರುಗಿಸಿದ್ದಾರೆ. ಪರಿಣಾಮ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ಪಕ್ಕದ ಸಿಮೆಂಟ್‌ ಕಟ್ಟೆಯ ಮೇಲೆ ಚಲಿಸಿ ಮುಂದಕ್ಕೆ ಸಾಗಿ ರಸ್ತೆಯ ಬದಿಯಲ್ಲಿ ಹಾಕಿದ್ದ ಸೂಚನಾ ಫ‌ಲಕದ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಪರಿಣಾಮ ಪ್ರಯಾಣಿಕರು ಗಾಯಗೊಂಡಿದ್ದು, ಸುರೇಶ್‌, ಕಿಶೋರ, ಅನುಷಾ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮ ಪೂಜಾರಿ ಮತ್ತು ಜಯಲಕ್ಷ್ಮೀ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next