Advertisement

ಬಾವಿಗೆ ಬಿದ್ದ ಕಾಳಿಂಗ ಸರ್ಪ ರಕ್ಷಣೆ; ಅರಣ್ಯಕ್ಕೆ ರವಾನೆ

03:45 AM Jul 02, 2017 | Team Udayavani |

ಸಿದ್ದಾಪುರ: ಸುಮಾರು 25 ಅಡಿ ಉದ್ದ ಇರುವ ಗಂಡು ಕಾಳಿಂಗ ಸರ್ಪವು ಕಾಡಿನಿಂದ ಆಹಾರ ಅರಸಿ ಬಂದು ಉಳ್ಳೂರು-74 ಗ್ರಾಮದ ದೊಡ್ಮನೆ ರತ್ನಾ ಪೂಜಾರಿ ಅವರ ಮನೆಯ ಬಾವಿಗೆ ಘಟನೆಯು ಜೂ. 30ರಂದು ನಡೆದಿದೆ.

Advertisement

ಉಳ್ಳೂರು-74 ಗ್ರಾಮದ ದೊಡ್ಮನೆ ಹುಲಿಗುಡ್ಡೆ ಮೀಸಲು ಅರಣ್ಯ ತಪ್ಪಲಿನ ಪ್ರದೇಶಕ್ಕೆ ತಾಗಿಕೊಂಡಿದ್ದು, ಆಗಾಗ ಕಾಡು ಪ್ರಾಣಿಗಳು ಹಾಗೂ ಹಾವುಗಳು ಆಹಾರ ಅರಸಿ ನಾಡಿಗೆ ಬರುವ ಘಟನೆಗಳು ಘಟಿಸುತ್ತಿರುತ್ತವೆ. ಕಾಳಿಂಗ ಸರ್ಪವು ಶುಕ್ರವಾರ ಆಹಾರ ಅರಸಿಕೊಂಡು ಬಂದು ದೊಡ್ಮನೆ ರತ್ನಾ ಪೂಜಾರಿ ಅವರ ಮನೆಯ ಆವರಣ ಇಲ್ಲದ ಬಾವಿಗೆ ಬಿದ್ದಿತ್ತು. ಇದನ್ನು ಕಂಡ ಮನೆಯವರು ತತ್‌ಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. 

ಶಂಕರನಾರಾಯಣ ಅರಣ್ಯ ಇಲಾಖೆಯ ಅಧಿಕಾರಿಗಳು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಅಜಯಗಿರಿ ನೇತೃತ್ವದ ತಜ್ಞರ ತಂಡದೊಂದಿಗೆ ಬಂದು ಹಾವನ್ನು ರಕ್ಷಿಸಿ ಸುರಕ್ಷಿತ ಅರಣ್ಯಕ್ಕೆ ರವಾನಿಸಿದರು.

ರಕ್ಷಣೆಯ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯಾರಣ್ಯಾಧಿಕಾರಿ ಗೋಪಾಲ್‌, ಸಿಬಂದಿಗಳಾದ ಹರೀಶ್‌, ವೀರಣ್ಣ, ಮಂಜುನಾಥ ಕಾಂಬ್ಳೆ, ಗುರುರಾಜ್‌, ಶ್ರೀಕಾಂತ, ಉಳ್ಳೂರು-74 ಗ್ರಾ. ಪಂ. ಸದಸ್ಯರಾದ ಯು. ಸುಧಾಕರ ಶೆಟ್ಟಿ, ಪ್ರಸಾದ ಶೆಟ್ಟಿ ಹಾಗೂ ಸ್ಥಳೀಯ ಯುವಕರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next