Advertisement
ಮೂಲ್ಕಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ಅತಿಕಾರಿಬೆಟ್ಟು ಗ್ರಾ. ಪಂ. ಮತ್ತು ಬೆಳ್ಳಾಯಾರು ಗ್ರಾ.ಪಂ. ವ್ಯಾಪ್ತಿಯ ಉದ್ದಕ್ಕೂ, ಅದರಲ್ಲೂ ರಾಜ್ಯ ಹೆದ್ದಾರಿಯ ಆಸುಪಾಸಿನಲ್ಲಿ ಹರಡಿದ್ದರೂ ಆದಾಯ ಮಾತ್ರ ಅತ್ಯಂತ ಕಡಿಮೆಯಾಗಿದೆ. ಕಾರಣ ಇಲ್ಲಿಯ ರಾಜ್ಯ ಹೆದ್ದಾರಿಯ ರಸ್ತೆಯ ಉದ್ದಕ್ಕೂ ಇರುವ ಪ್ರದೇಶವನ್ನು ಕೃಷಿ ವಲಯವಾಗಿ ಗುರುತಿಸಿರುವ ಕಾರಣ ಯಾವುದೇ ವಾಣಿಜ್ಯ ಕಟ್ಟಡಗಳು ತಲೆ ಎತ್ತುವುದು ಕಷ್ಟವಾಗಿದೆ. ಕೊಂಕಣ ರೈಲು ಮಾರ್ಗ ಕೂಡ ಈ ಗ್ರಾಮವನ್ನು ಸೀಳಿಕೊಂಡು ಹೋಗಿದೆ. ಗ್ರಾಮದ ಹಲವು ಎಕರೆ ಕೃಷಿ ಪ್ರದೇಶ ಹಡಿಲು ಬಿದ್ದಿದ್ದು, ಇಲ್ಲಿ ಕೃಷಿ ನಡೆಸುವುದಕ್ಕೆ ಪ್ರೋತ್ಸಾಹ ಸಿಗಬೇಕಿದೆ. ಗ್ರಾಮಕ್ಕೆ ಒಂದು ಸಾರ್ವಜನಿಕ ಶ್ಮಶಾನ ಇಲ್ಲ ಎಂಬ ಕೊರತೆ ಬಹಳ ಹಿಂದಿನಿಂದಲೇ ಇದೆ.
Related Articles
Advertisement
ಕೃತಕ ನೆರೆಯ ಬಾಧೆ
ಬಾಚಿಕಟ್ಟ ರಸ್ತೆ ಕಳೆದ ಹಲವು ವರ್ಷಗಳ ಹಿಂದೆ ಮಾಡ ಲಾಗಿದ್ದರೂ ಈಗಲೂ ಮಣ್ಣಿನ ರಸ್ತೆ ಯಾಗಿಯೇ ಉಳಿದಿದೆ. ಶಿಮಂತೂರಿನಿಂದ ಆರಂಭವಾಗಿ ಕುಮಾರ ಮಂಗಿಲ ದೇಗುಲದ ಬಳಿಯಿಂದ ಮಾನಂಪಾಡಿ ಸೇತುವೆವರೆಗಿನ ಸಣ್ಣ ನದಿಯ ಹೂಳು ತೆಗೆಯ ದಿರುವುದರಿಂದ ಇಲ್ಲಿ ಒಂದು ಸಣ್ಣ ಮಳೆ ಬಂದರೂ ಕೃತಕ ನೆರೆಯ ಬಾಧೆ ತಪ್ಪಿದಲ್ಲ. ಈ ಗ್ರಾಮದ ಪರಿ ಮಿತಿಯಲ್ಲಿ ರಾಜ್ಯ ಹೆದ್ದಾರಿಯ ಬಳಿ ಇರುವ ಕೆಂಚನಕೆರೆಯ ಕೆರೆ ಪ್ರದೇಶದ ಎಲ್ಲ ಮನೆಗಳಿಗೆ ನೀರಿನ ಆಶ್ರಯವನ್ನು ವರ್ಷವಿಡೀ ಕೊಡುವ ಸಮೃದ್ಧ ಕೆರೆಯಾಗಿದೆ. ಇದರ ಅಭಿವೃದ್ಧಿ ಅಗತ್ಯವಾಗಿ ಆಗಬೇಕಾಗಿದೆ.
ಇಕ್ಕಟ್ಟಾಗಿರುವ ರಸ್ತೆಗಳು
ಗ್ರಾ.ಪಂ. ವ್ಯಾಪ್ತಿಯ ಹಲವಾರು ಒಳ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಆದರೆ ಅವು ತೀರಾ ಇಕ್ಕಟ್ಟಾಗಿವೆ. ಕಾಂಕ್ರೀಟ್ ಹಾಕುವಾಗ ಹಳೆಯ ರಸ್ತೆ ಇದ್ದಷ್ಟು ಅಗಲಕ್ಕೆ ಹಾಕದೆ, ಆಚೀಚೆ ಜಾಗ ಬಿಟ್ಟು ಸಪೂರಕ್ಕೆ ಹಾಕಲಾಗಿದೆ. ಮುಖ್ಯವಾಗಿ ಗೇರುಕಟ್ಟೆ ಬಳಿಯಿಂದ ಕೋರªಬ್ಬು ದೈವಸ್ಥಾನಕ್ಕೆ ಹೋಗುವ ರಸ್ತೆ ಕಾಂಕ್ರೀಟ್ ಆಗಿದ್ದರೂ ಎರಡು ವಾಹನಗಳು ಈ ರಸ್ತೆಯಲ್ಲಿ ಎದುರು ಬದುರಾಗಿ ಬಂದಲ್ಲಿ ದೇವರೇ ಗತಿ. ಈ ರಸ್ತೆಯ ಚರಂಡಿ ಬದಿ ಗಟ್ಟಿ ಮಾಡಿ ಉಳಿದ ಜಾಗಕ್ಕೆ ಕಾಂಕ್ರೀಟ್ ಹಾಕಿದರೆ ಇವೆಲ್ಲದಕ್ಕೂ ಪರಿಹಾರ ಸಿಗಬಹುದು.
ಗ್ರಾಮ ವಿಶೇಷ
ಈ ಗ್ರಾಮದಲ್ಲಿ ವಾಯು ಸೇನೆಯ ಹಿರಿಯ ಅಧಿಕಾರಿಯಾಗಿದ್ದ 1971ರ ಪಾಕಿಸ್ಥಾನ -ಭಾರತ ಯುದ್ಧದಲ್ಲಿ ಹೋರಾಡಿ ರಾಷ್ಟ್ರಪತಿಗಳ ಪದಕ ಪಡೆದ ಗ್ರೂಪ್ ಕ್ಯಾ| ದಿನೇಶ್ಚಂದ್ರ ಭಂಡಾರಿಯವರು ಕಿಲ್ಪಾಡಿ ಗ್ರಾಮದವರು. ಅವರ ಅನಂತರ ಗ್ರಾಮದ ಕೆಲವು ಯುವಕರು ಸೇನೆಗೆ ಸೇರಿ ಸೇವೆ ಸಲ್ಲಿಸಿದ್ದಾರೆ.
ಯೋಗ ಕೇಂದ್ರ
ಕಿಲ್ಪಾಡಿ ಗ್ರಾಮದ ಜಯ ಮುದ್ದು ಶೆಟ್ಟಿ ಅವರು ಪರಿಸರದ ಸುಮಾರು 150 ಜನರಿಗೆ ಜಾತಿ ಮತಗಳ ಅಂತರ ಇಲ್ಲದೆ 10 ವರ್ಷಗಳಿಂದ ನಿತ್ಯವೂ ತನ್ನ ಮನೆಯಂಗಳದಲ್ಲಿ ಉಚಿತವಾಗಿ ಯೋಗ ತರಬೇತಿಯನ್ನು ನೀಡುತ್ತಿದ್ದು, ಹಲವಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಕೃಷಿ ವಲಯದ ಪರಿವರ್ತನೆ ಅಗತ್ಯ: ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಾರ್ನಾಡು-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಕೆರೆಕಾಡು ತಿರುವುವವರೆಗೆ ರಸ್ತೆಯ ಎರಡು ಬದಿಯಲ್ಲಿ ಹರಡಿಕೊಂಡಿದ್ದರೂ ಈ ಪ್ರದೇಶ ಕೃಷಿ ವಲಯ ಎಂದು ಗುರುತು ಮಾಡಿರುವುದು ಇಲ್ಲಿಯ ಪಂಚಾಯತ್ಗೆ ಆದಾಯ ಬರುವ ಬಹುತೇಕ ವ್ಯವಹಾರ-ವಾಣಿಜ್ಯ ಕೇಂದ್ರಗಳ ಸ್ಥಾಪನೆಗೆ ತೊಂದರೆಯಾಗಿದೆ. ಆದುದರಿಂದ ಕೃಷಿ ವಲಯದ ಪರಿವರ್ತನೆ ಅತೀ ಅಗತ್ಯ ಹಾಗೂ ಶೀಘ್ರ ಆಗಬೇಕಾಗಿದೆ. –ಲೀಲಾವತಿ, ಅಧ್ಯಕ್ಷರು, ಕಿಲ್ಪಾಡಿ ಗ್ರಾ.ಪಂ.
ಸವಲತ್ತು ಒದಗಿಸಿ: ರಸ್ತೆ ಮತ್ತು ನೀರಿನ ಸವಲತ್ತುಗಳನ್ನು ವಿಸ್ತಾರಗೊಳಿಸಿದಲ್ಲಿ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಒಳ್ಳೆಯದಾದೀತು. ಅವಕಾಶ ಇದ್ದಲ್ಲಿ ವಾಣಿಜ್ಯ ಕಟ್ಟಡಗಳು ಬೆಳೆದರೆ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಪೂರಕವಾಗಬಹುದು. –ಭಾಸ್ಕರ ಶೆಟ್ಟಿಗಾರ, ಗ್ರಾಮಸ್ಥರು
-ಸರ್ವೋತ್ತಮ ಅಂಚನ್