Advertisement

ಕಿಡ್ನಿ ಮಾರಾಟಕ್ಕಿಟ್ಟ ರೈತ!

12:22 AM Aug 24, 2019 | mahesh |

ಸಹರಾನ್ಪುರ: ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸಿದ ಕಾರಣ ನೊಂದ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ರೈತರೊಬ್ಬರು ತಮ್ಮ ಕಿಡ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ‘ನನ್ನ ಒಂದು ಕಿಡ್ನಿ ಮಾರಾಟಕ್ಕಿದ್ದು, ಬೇಕಾದವರು ಸಂಪರ್ಕಿಸಬಹುದು’ ಎಂದು ಅವರು ತಮ್ಮ ಗ್ರಾಮಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಚಟ್ಟರ್‌ ಸಾಲಿ ಗ್ರಾಮದ ರವಿಕುಮಾರ್‌(30) ಕಿಡ್ನಿ ಮಾರಲು ಹೊರಟ ಯುವ ರೈತ. ‘ಪ್ರಧಾನ ಮಂತ್ರಿ ಕುಶಲ ವಿಕಾಸ ಯೋಜನೆ ಅಡಿ ಹೈನುಗಾರಿಕೆ ತರಬೇತಿ ಪಡೆದು, ಸಂಬಂಧಿಗಳಿಂದ ಸಾಲ ಪಡೆದು ಜಾನುವಾರುಗಳನ್ನು ಕೊಂಡಿದ್ದೆ. ಈಗ ಅವರೆಲ್ಲ ಹಣ ನೀಡುವಂತೆ ಕೇಳುತ್ತಿದ್ದಾರೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next