Advertisement

ಬಾಲಕಿಯ ಕಿಡ್ನ್ಯಾಪ್ ಮಾಡಿ ನಾಲೆಗೆ ಎಸೆದ ಕಿರಾತಕರು

04:37 PM Sep 20, 2017 | Team Udayavani |

ಶಿವಮೊಗ್ಗ: ನಗರದ ಗೋಪಾಳಂ ಬಡಾವಣೆಯ ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿ ತುಂಗಾ ನಾಲೆಗೆ ಎಸೆದ ಕಳವಳಕಾರಿ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಅದೃಷ್ಟವಷಾತ್‌ ಬಾಲಕಿ ರಕ್ಷಣೆಗೊಳಗಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Advertisement

ಅಂಗಡಿಗೆಂದು ಹೋಗಿದ್ದ ಬಾಲಕಿ ಈಶ್ವರಿ ಎಂಬ 16 ವರ್ಷದ ಬಾಲಕಿಯನ್ನು ಆಮ್ನಿ ವಾಹನದಲ್ಲಿ ಬಂದ ಮುಸುಕು ಧಾರಿಗಳು ಅಪಹರಿಸಿ ಅನುಪಿನಕಟ್ಟೆ ಎಂಬಲ್ಲಿ ನಾಲೆಗೆ ಎಸೆದು ಪರಾರಿಯಾಗಿದ್ದಾರೆ.

ಸುಮಾರು 1 ಗಂಟೆಗಳ ಕಾಲ ಬಾಲಕಿ ರಕ್ಷಣೆಗಾಗಿ ಪರದಾಡಿದ್ದು , ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಹರಸಾಹಸ ಪಟ್ಟು  ಈಶ್ವರಿಯನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಕೂಡಲೇ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಈಶ್ವರಿ ಪೋಷಕರಿಗೆ ನೆರೆ ಮನೆಯವರೊಂದಿಗೆ ಜಗಳವಾಗಿದ್ದು ಇದೇ ಹಿನ್ನಲೆಯಲ್ಲಿ ಕೃತ್ಯ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Advertisement

ತುಂಗಾ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next