Advertisement

“ನಿಮ್ಮಷ್ಟಕ್ಕೆ ನೀವು ಇರಿ” ಎಂದ ಅಭಿಮಾನಿಗೆ ಕಿಚ್ಚನಿಂದಲೇ ಬಂತು ಖಡಕ್ ಉತ್ತರ..!

02:18 PM Dec 21, 2022 | Team Udayavani |

ಬೆಂಗಳೂರು: ಇತ್ತೀಚೆಗೆ ನಟ ದರ್ಶನ್‌ ಅವರ ಮೇಲಾದ ಘಟನೆಗೆ ಕಿಚ್ಚ ಸುದೀಪ್‌ ಅವರು ಟ್ವಿಟರ್‌ ನಲ್ಲಿ ಪ್ರತಿಕ್ರಿಯಿಸಿ ಈ ರೀತಿ ಯಾರೊಂದಿಗೂ ಆಗಬಾರದು. ಅಪ್ಪು – ದರ್ಶನ್ ಇಬ್ಬರೂ ನನಗೆ ಆತ್ಮೀಯರು ಎಂದು ಹೇಳಿ ಅಭಿಮಾನಿಗಳ ಬಗ್ಗೆಯೂ ಹೇಳಿದ್ದರು.

Advertisement

ಕಿಚ್ಚ ಒಬ್ಬ ಕಲಾವಿದನಾಗಿ ಇನ್ನಬ್ಬ ಕಲಾವಿದನ ಜೊತೆ ನಿಂತು, ಎರಡೂ ಕಲಾವಿದರ ಅಭಿಮಾನಿಗಳ ಬಗ್ಗೆ ಮಾತಾನಾಡಿದ ವಿಚಾರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಈ ನಡುವೆ ಟ್ವಿಟರ್‌ ನಲ್ಲಿ ಕಿಚ್ಚನ ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದ್ದಕ್ಕೆ ಸುದೀಪ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿಗೆ ಬಂದು ಕೋಲ ವೀಕ್ಷಿಸಿದ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ: ವಿಡಿಯೋ ವೈರಲ್

ಮಹಾರಾಷ್ಟ್ರ ಕಿಚ್ಚ ಸುದೀಪ್‌ ಎನ್ನುವ ಫ್ಯಾನ್ಸ್‌ ಪೇಜ್‌ ವೊಂದು ನಿನ್ನೆ ಸುದೀಪ್‌  ಅವರು ಮಾಡಿದ ಟ್ವೀಟ್‌ ಗೆ ಸಂಬಂಧಿಸಿ “ ನಾಯಿ ಬಾಲ ಎಂದಿಗೂ ನೇರವಾಗಲ್ಲ. ನಾನು ಬಾಸ್‌ ಎಂದು ಹೇಳುವಷ್ಟು ಅರ್ಹತೆ ನನಗಿಲ್ಲ. ಒಂದು ಚಪ್ಪಾಳೆಗೆ ಎರಡೂ ಕೈಗಳು ಬೇಕು, ಎರಡೂ ಕೈಗಳಿಲ್ಲದೆ ಚಪ್ಪಾಳೆ ಸಾಧ್ಯವಾಗಲ್ಲ. ದಯವಿಟ್ಟು ನೀವು ನಿಮ್ಮಷ್ಟಕ್ಕೆ ಇದ್ದು, ಅಭಿಮಾನಿಗಳ ಬಗ್ಗೆ ಯೋಚಿಸಿ. ಕೆಎಫ್‌ ಐ ನಲ್ಲಿ ಯಾರೂ  ನಿಮ್ಮ ಜೊತೆ ಇರಲ್ಲ. ಅಭಿಮಾನಿಗಳನ್ನು ಬಿಟ್ಟು. ಒಳ್ಳೆಯತನ ಗೆಲ್ಲುತ್ತದೆ ಕಿಚ್ಚ ಸುದೀಪ್‌ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಕಿಚ್ಚ ಪ್ರತಿಕ್ರಿಯಿಸಿ, ನನ್ನ ಅಭಿಮಾನಿಗಳ ಬಗ್ಗೆ ನಾನು ಯೋಚಿಸುವ ಅಗತ್ಯವಿಲ್ಲ ಫ್ರೆಂಡ್‌. ಅವರಿಂದ ನಾನು ದೂರವಿಲ್ಲ ನಾನು ಅವರೊಂದಿಗೆ ಬದುಕುತ್ತೇನೆ … ನಾನು ಅವರಿಗಾಗಿ ಬದುಕುತ್ತೇನೆ. ಅವರು ನನ್ನನ್ನು ಬದುಕಿಸುತ್ತಾರೆ ಎಂದು ಹೇಳಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next