Advertisement

23ಕ್ಕೆ ಸೋಲಿಲ್ಲದ ಸರದಾರ ಖರ್ಗೆ ಮನೆಗೆ

10:46 PM May 12, 2019 | Lakshmi GovindaRaj |

ಕಲಬುರಗಿ:” ಯಾರು ಕುಂಟರು, ಯಾರು ಕಳ್ಳೆತ್ತು ಹಾಗೂ ಯಾರ ಶಕ್ತಿ ಏನು ಎನ್ನುವುದು ಮೇ 23ಕ್ಕೆ ಗೊತ್ತಾಗಲಿದೆ. ಅಲ್ಲದೇ ಅಂದು ಸೋಲಿಲ್ಲದ ಸರದಾರ ಡಾ| ಮಲ್ಲಿಕಾರ್ಜುನ ಖರ್ಗೆ ಮನೆಗೆ ಹೋಗುವುದು ನಿಶ್ಚಿತ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ತಮ್ಮನ್ನು ಕಡೆಗಣಿಸಿ ಮಗನ ಹಾದಿ ಸುಗಮ ಮಾಡಿದ್ದಕ್ಕೆ ಬೇಸತ್ತೇ ಪಕ್ಷದಿಂದ ತಾವಲ್ಲದೇ ಬಾಬುರಾವ ಚಿಂಚನಸೂರ, ಡಾ| ಎ.ಬಿ.ಮಾಲಕರಡ್ಡಿ, ಡಾ| ಉಮೇಶ ಜಾಧವ ಹೊರ ಬಂದಿದ್ದೇವೆ. ಸೋತವರು ತಮ್ಮನ್ನೇನು ಸೋಲಿಸುತ್ತಾರೆ ಎನ್ನುವುದಕ್ಕೆ ಮೇ 23ರಂದು ಉತ್ತರ ಸಿಗಲಿದೆ. ಅಲ್ಲದೇ ರಾಜಕೀಯ ಧೃವೀಕರಣಗೊಂಡು ಹೊಸ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next