Advertisement

ಭದ್ರೆಯ ಆರ್ಭಟಕ್ಕೆ‌ ಕೊಚ್ಚಿ ಹೋದ ಖಾಂಡ್ಯ- ಬಾಳಗದ್ದೆ ತೂಗು‌ ಸೇತುವೆ‌

09:27 AM Aug 11, 2019 | keerthan |

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಹಾಮಳೆ ಮುಂದುವರೆದಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿ‌ ಹರಿಯುತ್ತಿದೆ. ಭದ್ರಾ ನದಿ‌ ಆರ್ಭಟಕ್ಕೆ‌ ಖಾಂಡ್ಯ- ಬಾಳಗದ್ದೆ ತೂಗು‌ ಸೇತುವೆ‌ ಕೊಚ್ಚಿ ಹೋಗಿದೆ.

Advertisement

ಚಿಕ್ಕಮಗಳೂರು ತಾಲೂಕಿನ‌ ಖಾಂಡ್ಯ ಬಳಿ‌‌ ಇರುವ ತೂಗು ಸೇತುವೆ ಕೊಚ್ಚಿ ಹೋದ ಪರಿಣಾಮ ಬಾಳಗದ್ದೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಭದ್ರಾ ನದಿ‌ ದಾಟಲು ಈ ಗ್ರಾಮಕ್ಕೆ ಈ ತೂಗು ಸೇತುವೆಯೇ ಆಸರೆಯಾಗಿತ್ತು. ಐವತ್ತಕ್ಕೂ ಹೆಚ್ಚು ಕುಟುಂಬಗಳ‌ ಸಂಪರ್ಕ ಬಂದ್ ಆಗಿರುವುದರಿಂದ ಈ ಕುಟುಂಬಗಳು ಆತಂಕಕ್ಕೆ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next