Advertisement

ಠಾಕ್ರೆ ಹತ್ಯೆಗೆ ಯತ್ನಿಸಿದ್ದ ಖಲಿಸ್ಥಾನಿ ಉಗ್ರರು

12:13 AM May 16, 2019 | Team Udayavani |

ಹೊಸದಿಲ್ಲಿ: 1989ರಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಹತ್ಯೆಗೆ ಖಲಿಸ್ಥಾನಿ ಉಗ್ರರು ಯತ್ನಿಸಿದ್ದರು ಎಂದು ಶಿವಸೇನೆಯ ಮಾಜಿ ಮುಖಂಡ ನಾರಾಯಣ ರಾಣೆ ತಮ್ಮ ಆತ್ಮ ಚರಿತ್ರೆಯಲ್ಲಿ ಉಲ್ಲೇಖೀಸಿದ್ದಾರೆ. ಈ ಭೀತಿಯಿಂದಾಗಿ ಠಾಕ್ರೆ ತಮ್ಮ ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದರು. ಅಲ್ಲದೆ ತಾವು ಪತ್ನಿಯೊಂದಿಗೆ ಲೋಣಾವಲಕ್ಕೆ ತೆರಳಿದ್ದರು. ಠಾಕ್ರೆ ನಿವಾಸ ಮಾತೋಶ್ರೀಗೆ ಉಗ್ರರು ದಾಳಿ ನಡೆಸಲು ಯೋಜಿಸಿದ್ದಾರೆ ಎಂಬುದಾಗಿ ಆಗ ಸಿಎಂ ಆಗಿದ್ದ ಶರದ್‌ ಪವಾರ್‌ ತಿಳಿಸಿದ್ದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next