Advertisement

ಕೆಜಿಎಫ್ ಬಾಬು ಸಹೋದರಿ ಮನೆಗೆ ಬೆಂಕಿ; ಆತನದ್ದೇ ಕೈವಾಡ ಎಂದ ಬಾಬು!

11:22 PM Feb 04, 2023 | Team Udayavani |

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಕೆಜಿಎಫ್ ಬಾಬು ಅವರ ಸಹೋದರಿಯ ಸಂಪಂಗಿರಾಮನಗರದ ಕೆ.ಎಸ್‌.ಗಾರ್ಡನ್‌ನ ಮನೆಯಲ್ಲಿ ಶನಿವಾರ ನಸುಕಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅದರಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಆರ್‌.ವಿ.ದೇವರಾಜ್‌ ಪುತ್ರ ಯುವರಾಜ್‌ ಕೈವಾಡವಿದೆ ಎಂದು ಬಾಬು ಮತ್ತು ಅವರ ಸಹೋದರಿ ಶಾಹಿನ್‌ ತಾಜ್‌ ಆರೋಪಿಸಿದ್ದಾರೆ.

Advertisement

ಈ ಸಂಬಂಧ ಸಂಪಂಗಿರಾಮನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಪ್ರಚಾರಕ್ಕಾಗಿ ಆರೋಪ: ಯುವರಾಜ್‌ಕೆಜಿಎಫ್‌ ಬಾಬು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರು ಪ್ರಚಾರಕ್ಕಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಯುವರಾಜ್‌ ಹೇಳಿದ್ದು, ಅವರು ಕೂಡ ಪೊಲೀಸ್‌ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next