Advertisement

ಕೇಶ್ವಾರ ಕೊಲೆ ಪ್ರಕರಣ: ಮೂವರ ಬಂಧನ

11:56 AM Jul 18, 2022 | Team Udayavani |

ಕಲಬುರಗಿ: ಅಫಜಲಪುರ ತಾಲೂಕಿನ ಕೇಶ್ವಾರ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದ ಜೇವರ್ಗಿ ತಾಲೂಕಿನ ಇಜೇರಿಯ ಗುರಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್‌ ಠಾಣೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತರನ್ನು ಕೊಲೆ ಯಾದ ಗುರಪ್ಪನ ಪತ್ನಿ ಮಹಾದೇವಿ, ಸಂತೋಷ ಮತ್ತು ಸತೀಶ ಎಂದು ಗುರುತಿಸಲಾಗಿದೆ.

ಬಂಧಿತರನ್ನು ಪೊಲೀಸರು ವಿಚಾರಣೆ ಮಾಡಿದಾಗ, ಸಂತೋಷ ಮತ್ತು ಗುರಪ್ಪನ ಪತ್ನಿ ಮಹಾದೇವಿ ಮಧ್ಯೆ ಅಕ್ರಮ ಸಂಬಂಧ ಇತ್ತು. ಇದನ್ನು ಆಗಾಗ ಪ್ರಶ್ನಿಸಿ ಗುರಪ್ಪ ಮಹಾದೇವಿಗೆ ಹೊಡೆಯುತ್ತಿದ್ದ. ಇದರಿಂದ ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಗುರಪ್ಪನನ್ನೇ ಜೇವರ್ಗಿ ತಾಲೂಕಿನಲ್ಲಿ ಇಜೇರಿಯಲ್ಲಿ ಕೊಲೆ ಮಾಡಿ, ಪ್ರಕರಣದ ಹಾದಿ ತಪ್ಪಿಸಲು ಫರಹತಾಬಾದ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅಫಜಲಪುರ ತಾಲೂಕಿನ ಕೇಶ್ವಾರದ ಜಮೀನಿಮಲ್ಲಿ ಮೃತ ದೇಹ ಬೀಸಾಡಿದ್ದರು. ಅನುಮಾನ ಮತ್ತು ಖಚಿತ ಮಾಹಿತಿ ಬೆನ್ನು ಹತ್ತಿದ್ದ ಜೇವರ್ಗಿ ಪೊಲೀಸರು ಕೊನೆಯಲ್ಲಿ ಪತ್ನಿ ಮಹಾದೇವಿಯನ್ನು ವಶಕ್ಕೆ ಪಡೆದು ಬಾಯಿ ಬಿಡಿಸಿದಾಗ ಇಡೀ ಪ್ರಕರಣ ಬಯಲಾಗಿದೆ. ಮೂವರನ್ನು ವಿಚಾರಣೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next