Advertisement

ನಿಯಮ ಉಲ್ಲಂಘಿಸಿ ನೇಮಕವಾಗಿದ್ದ ಕೇಸರಹಟ್ಟಿ ಆಶಾಕಾರ್ಯಕರ್ತೆ ವಜಾ

05:52 PM Jan 04, 2022 | Team Udayavani |

ಗಂಗಾವತಿ: ತಾಲೂಕಿನ ಕೇಸರಹಟ್ಟಿ ಗ್ರಾಮದಲ್ಲಿ ಆರ್‌ಸಿಎಚ್ ನಿಯಮ ಉಲ್ಲಂಘಿಸಿ ಆಶಾಕಾರ್ಯಕರ್ತೆಯ ಹುದ್ದೆಗೆ ನೇಮಕವಾಗಿದ್ದ ಶಾಂತಮ್ಮ ಎಂಬಾಕೆಯನ್ನು ವಜಾ ಮಾಡಲು ಹೊಸ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಪ್ರವೀಣಕುಮಾರ ಹಿರೇಮಠ ಆದೇಶ ಹೊರಡಿಸಿದ್ದಾರೆ.

Advertisement

ಈ ಮುಂಚೆ ಕೇಸರಹಟ್ಟಿ ಗ್ರಾಮದ ನಿವಾಸಿ ಮಂಜುಳಾ ಲಿಂಗಯ್ಯಸ್ವಾಮಿ ಆಶಾಕಾರ್ಯಕರ್ತೆಯಾಗಿ ಸೇವೆ ಮಾಡಿ ಕಾರಣಾಂತರಗಳಿಂದ 2011 ರಿಂದ ಅನಧಿಕೃತವಾಗಿ ಗೈರಾಗಿದ್ದರು. ಈ ಮಧ್ಯೆ ಕೇಸರಹಟ್ಟಿಯ ಕಿರಿಯ ವೈದ್ಯಕೀಯ ಮಹಿಳಾ ಆರೋಗ್ಯ ಸಹಾಯಕಿ ಸೂಚನೆಯಂತೆ ಶಾಂತಮ್ಮ ಎಂಬಾಕೆ ಆಶಾಕಾರ್ಯಕರ್ತೆಯ ತರಬೇತಿ ಪಡೆದು 2016 ಸೆಪ್ಟೆಂಬರ್ 24 ರಿಂದ ಕೇಸರಹಟ್ಟಿಯ ಆಶಾಕಾರ್ಯಕರ್ತೆಯ ಹುದ್ದೆಗೆ ಹಾಜರಾಗಿದ್ದರು.

ಕೇಸರಹಟ್ಟಿ ಆಶಾಕಾರ್ಯಕರ್ತೆಯ ನೇಮಕಾತಿ ಆರ್‌ಸಿಎಚ್ ಹಾಗೂ ಸರಕಾರದ ನಿಯಮ ಉಲ್ಲಂಘಿಸಿ ಮಾಡಲಾಗಿದೆ ಎಂದು ಮಂಜುಳಾ, ಶಂಕ್ರಯ್ಯಸ್ವಾಮಿ, ನಾಗರಾಜ ಸಂಕನಾಳ ಇವರು ಜಿಲ್ಲಾ ಹಾಗೂ ರಾಜ್ಯಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.

ಶಾಂತಮ್ಮ ಇವರ ನೇಮಕಾತಿ ಸಂಬಂಧ ಕೇಸರಹಟ್ಟಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಠರಾವು ಮಾಡದೇ ಇರುವುದು ಹಾಗೂ ಇವರು ಸ್ಥಳೀಯರಲ್ಲದ ಕಾರಣ ಆಶಾಕಾರ್ಯಕರ್ತೆಯ ಹುದ್ದೆಯಿಂದ ಶಾಂತಮ್ಮ ಎಂಬಾಕೆಯನ್ನುವಜಾಗೊಳಿಸಲಾಗಿದೆ ಎಂದು ಡಾ|ಪ್ರವೀಣಕುಮಾರ ಹಿರೇಮಠ ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next