Advertisement

ಕೆರೆಕಾಡು: ಮನೆ ಮೇಲೆ ತೆಂಗಿನ ಮರ ಬಿದ್ದು ಮಹಿಳೆಗೆ ಗಂಭೀರ ಗಾಯ

08:09 PM Dec 13, 2022 | Team Udayavani |

ಹಳೆಯಂಗಡಿ: ಇಲ್ಲಿನ ಕೆರೆಕಾಡಿನಲ್ಲಿ ಮನೆಯೊಂದರ ಮೇಲೆ ತೆಂಗಿನ ಮರವೊಂದು ಬಿದ್ದು ಮನೆಯಲ್ಲಿದ್ದ ಶ್ರೀನಿವಾಸ್‌ ಶೆಟ್ಟಿಗಾರ್‌ ಅವರ ಪತ್ನಿ ಸವಿತಾ ಅವರಿಗೆ ಗಂಭೀರ ಗಾಯವಾದ ಘಟನೆ ಡಿ.13ರಂದು ನಡೆದಿದೆ.

Advertisement

ತೀವ್ರ ಗಾಳಿ ಬೀಸಿದ್ದರಿಂದ ಮನೆಯ ಆವರಣದಲ್ಲಿದ್ದ ತೆಂಗಿನ ಮರವು ಮನೆಯ ಒಂದು ಪಾರ್ಶ್ವಕ್ಕೆ ಬಿದ್ದಿತ್ತು. ಈ ಘಟನೆಯಿಂದ ಕಾಲಿಗೆ ಗಂಭೀರ ಗಾಯವಾಗಿದ್ದ ಸವಿತಾ ಅವರನ್ನು ತತ್‌ಕ್ಷಣ ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ.

ಘಟನೆ ವೇಳೆ ಆತ್ತೆ ಕೋಣೆಯಲ್ಲಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಇಬ್ಬರು ಮಕ್ಕಳಿದ್ದು ಅವರು ಶಾಲೆಗೆ ಹಾಗೂ ಶ್ರೀನಿವಾಸ್‌ ಶೆಟ್ಟಿಗಾರ್‌ ರಿಕ್ಷಾದೊಂದಿಗೆ ಹೊರಗೆ ತೆರಳಿದ್ದರು.

ಸ್ಥಳಕ್ಕೆ ಕಿಲ್ಪಾಡಿ ಗ್ರಾ. ಪಂ.ನ ಗ್ರಾಮಕರಣಿಕ ಜ್ಞಾನೇಶ್ವರಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಮನೆ ಅಂಗಳದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ… ಜೀವ ಭಯದಲ್ಲಿ ಗ್ರಾಮಸ್ಥರು

Advertisement
Advertisement

Udayavani is now on Telegram. Click here to join our channel and stay updated with the latest news.

Next