Advertisement

ಕೇರಳದ ಹಲವೆಡೆ ಭಾರೀ ಮಳೆ: ವ್ಯಕ್ತಿ ಸಾವು

12:20 AM Aug 01, 2022 | Team Udayavani |

ತಿರುವನಂತಪುರ/ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ರವಿವಾರ ಉಂಟಾದ ಹಠಾತ್‌ ಪ್ರವಾಹದಲ್ಲಿ ಒಬ್ಬ ವ್ಯಕ್ತಿ ಅಸುನೀಗಿ, ಮತ್ತೊಬ್ಬನಿಗೆ ತೀವ್ರ ಗಾಯಗಳಾಗಿವೆ. ಇತರ ಮೂವರನ್ನು ಪಾರು ಮಾಡಲಾಗಿದೆ.

Advertisement

ಜಿಲ್ಲೆಯ ಕುಂಭವುರುತ್ತಿ ಜಲಪಾತದಲ್ಲಿ ಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ಕೂಡ ಪ್ರವಾಹದಿಂದ ಹಲವು ರೀತಿಯ ಹಾನಿಯಾಗಿದೆ.

ಈ ನಡುವೆ, ರಾಜ್ಯದಲ್ಲಿ ಆ. 4ರ ವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರವಿವಾರ ಮುನ್ನೆಚ್ಚರಿಕೆ ಕೊಟ್ಟಿದೆ.

12 ಮಂದಿ ನೀರು ಪಾಲು: ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಕೋಪಕ್ಕೆ ನದಿಗಳು ಉಕ್ಕೇರಿ ಹರಿದಿವೆ. ಇದರಿಂದಾಗಿ ಒಟ್ಟು 12 ಮಂದಿ ನೀರು ಪಾಲಾಗಿದ್ದಾರೆ. ಈ ಪೈಕಿ ಶ್ರೀಗಂಗಾನಗರ ಜಿಲ್ಲೆಯೊಂದರಲ್ಲಿಯೇ ಐವರು ನೀರು ಪಾಲಾಗಿದ್ದಾರೆ.

ಹಲವೆಡೆ ಮಳೆ: ಪಂಜಾಬ್‌ ಮತ್ತು ಹರಿಯಾಣದ ವಿವಿಧ ಜಿಲ್ಲೆಗಳಲ್ಲಿ ರವಿವಾರ ಧಾರಾಕಾರ ಮಳೆಯಾಗಿದೆ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಮಳೆಯಾದ್ದರಿಂದ ಬಿಯಾಸ್‌ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಿದೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಗಂಗಾ ನದಿ ಉಕ್ಕಿ ಹರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next