Advertisement

ಓಣಂ ಬಂಪರ್‌ : ವಂತಿಗೆ ಕೂಡಿಸಿ ಟಿಕೆಟ್‌ ಕೊಂಡವರಿಗೆ ತಲಾ ಕೋಟಿ ರೂಪಾಯಿಗಳ ಲಾಟರಿ!

01:53 AM Sep 20, 2019 | mahesh |

ಕಾಸರಗೋಡು: ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಯ ಜುವೆಲ್ಲರಿಯೊಂದರ ಆ ಆರು ಮಂದಿ ಸಿಬಂದಿ ತಲಾ 50 ರೂ.ಗಳಂತೆ ವಂತಿಗೆ ಒಟ್ಟುಗೂಡಿಸಿ 300 ರೂ. ಬೆಲೆಯ ಕೇರಳ ರಾಜ್ಯ ಲಾಟರಿಯ ಓಣಂ ಅದೃಷ್ಟ ಚೀಟಿ ಖರೀದಿಸಿದ್ದರು. ಈಗ ಅವರು ಪರಸ್ಪರ ಹಂಚಿಕೊಳ್ಳಬೇಕಾದ್ದು ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಮೌಲ್ಯದ ಬಹುಮಾನವನ್ನು!

Advertisement

ಬೇಕೋ ಬೇಡವೋ ಎಂಬಂತೆ ವಂತಿಗೆ ಕೂಡಿಸಿ ಟಿಕೆಟ್‌ ಖರೀದಿಸಿದವರಿಗೆ ಈಗ ಬಂಪರ್‌ ಬಹುಮಾನವೇ ಒಲಿದಿದೆ. ಕರುನಾಗಪಳ್ಳಿಯ ಚುಂಗತ್‌ ಜುವೆಲರಿಯ ಸಿಬಂದಿಯಾಗಿರುವ ರೋಣಿ, ವಿವೇಕ್‌, ರತೀಶ್‌, ಸುಬಿನ್‌, ರೆಂಜಿನ್‌, ರಾಜೀವ್‌ ಲಭಿಸಿದ್ದು 12 ಕೋಟಿ ರೂ! ಈ ಬಂಪರ್‌ ಬಹುಮಾನ ಟಿ.ಎಂ. 160869 ಸಂಖ್ಯೆಯ ಟಿಕೆಟ್‌ಗೆ ಒಲಿದಿದೆ. ಕಾಯಂಕುಳಂ ಶ್ರೀ ಮುರುಗ ಲಾಟರಿ ಏಜೆನ್ಸಿಯ ಶಿವನ್‌ ಕುಟ್ಟಿ ಈ ಟಿಕೆಟ್‌ ಮಾರಾಟ ಮಾಡಿದ್ದರು.

ವಿಜೇತರಾದ ಆರು ಮಂದಿಗೆ ಒಟ್ಟು ತೆರಿಗೆ ಕಳೆದು 7.56 ಕೋಟಿ ರೂ. ಲಭಿಸಲಿದೆ. ಅಂದರೆ ಪ್ರತಿಯೊಬ್ಬರಿಗೆ ಸುಮಾರು ಒಂದೂಕಾಲು ಕೋ.ರೂ. ಟಿಕೆಟ್‌ ಮಾರಾಟ ಮಾಡಿದ ಶಿವನ್‌ ಕುಟ್ಟಿಗೆ 1.20 ಕೋಟಿ ರೂ. ಕಮಿಷನ್‌ ಲಭಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next