Advertisement

ಮುಸ್ಲಿಂ ಹುಡುಗಿಯನ್ನು ವೇದಿಕೆಗೆ ಕರೆದಿದ್ದೇಕೆ? : ಕೇರಳದಲ್ಲಿ ಹೊಸ ವಿವಾದ ; ಭಾರಿ ಚರ್ಚೆ

04:18 PM May 14, 2022 | Team Udayavani |

ಮಲಪ್ಪುರಂ : ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದನ್ನು ವಿರೋಧಿಸಿ ಮುಸ್ಲಿಂ ವಿದ್ವಾಂಸರೊಬ್ಬರು ಮಾಡಿದ ವರ್ತನೆ, ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟ ಬೆನ್ನಲ್ಲೇ, ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲಮಾ ಶನಿವಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

Advertisement

ಮಲಪ್ಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ ‘ಮದರಸಾ’ ಕಟ್ಟಡ ಉದ್ಘಾಟನೆ ವೇಳೆ ವಿದ್ಯಾರ್ಥಿಗಳನ್ನು ಅಭಿನಂದಿಸುವ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ವೇದಿಕೆಗೆ ಕರೆದಿದ್ದಕ್ಕೆ ಸಮಸ್ತ ಮುಖಂಡ ಎಂಟಿ ಅಬ್ದುಲ್ಲಾ ಮುಸ್ಲಿಯಾರ್ ತನ್ನ ಅಕ್ಕ ಪಕ್ಕದಲ್ಲಿ ನಿಂತಿದ್ದವರನ್ನು ಗದರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವಳನ್ನು ವೇದಿಕೆಗೆ ಆಹ್ವಾನಿಸಿದವರು ಯಾರು? ನೀವು ಈ ತಪ್ಪನ್ನು ಪುನರಾವರ್ತಿಸಿದರೆ ನೀವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಸಮಸ್ತದ ನಿಯಮಗಳು ತಿಳಿದಿಲ್ಲವೇ? ಬದಲಿಗೆ ಆಕೆಯ ಪೋಷಕರನ್ನು ಆಹ್ವಾನಿಸಿ” ಎಂದು ಅಬ್ದುಲ್ಲಾ ಮುಸ್ಲಿಯಾರ್ ಸಂಘಟಕರಿಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮುಖಂಡ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಘಲ್ ಅವರು ವಿದ್ಯಾರ್ಥಿನಿಗೆ ಸ್ಮರಣಿಕೆಯನ್ನು ಹಸ್ತಾಂತರಿಸಿದ್ದರು. ಪ್ರಶಸ್ತಿ ಹಸ್ತಾಂತರಿಸಿದ ಬೆನ್ನಲ್ಲೇ ಎಂಟಿ ಅಬ್ದುಲ್ಲಾ ಮುಸಲಿಯಾರ್ ಅವರು ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದು ಏಕೆ ಎಂದು ಸಂಘಟಕರನ್ನು ಪ್ರಶ್ನಿಸಿದ್ದರು.

ರಾಜಕೀಯ ಪಕ್ಷಗಳು, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಶಾಸಕರು ಮುಸಲಿಯಾರ್ ಅವರ ಹೇಳಿಕೆಯನ್ನು ಟೀಕಿಸಿದ್ದರು ಮತ್ತು ಖಂಡಿಸಿದ್ದಾರೆ.

Advertisement

ಸಮರ್ಥನೆ

ಸಮಾರಂಭದಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯನ್ನು ಅವಮಾನಿಸಲಾಗಿದೆ ಎಂಬ ಆರೋಪವನ್ನು ತಿರಸ್ಕರಿಸಿದ ಸಮಸ್ತದ ಅಧ್ಯಕ್ಷ ಜಿಫ್ರಿ ಮುತ್ತುಕ್ಕೋಯ ತಂಘಲ್, ಘಟನೆಗೆ ಸಂಬಂಧಿಸಿದಂತೆ ಆಕೆ ಅಥವಾ ಅವರ ಕುಟುಂಬ ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದಾರೆ.

ಅಬ್ದುಲ್ಲಾ ಮುಸ್ಲಿಯಾರ್, ಸಂಸ್ಥೆಯು ಕೆಲವು ನಂಬಿಕೆಗಳು ಮತ್ತು ತೀರ್ಪುಗಳನ್ನು ಹೊಂದಿದ್ದು, ಅದನ್ನು ಬದಲಾಯಿಸಲಾಗುವುದಿಲ್ಲ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ‘ಅವಮಾನ’ ಎಂಬ ಪದದ ಬಳಕೆಯೂ ತಪ್ಪಾಗಿದೆ, ಆಲ್ ಕೇರಳ ಉಲೇಮಾ ಅಸೋಸಿಯೇಷನ್ ನಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ವೇದಿಕೆಯನ್ನು ಹಂಚಿಕೊಳ್ಳುವ ಯಾವುದೇ ಪದ್ಧತಿ ಇಲ್ಲ ಎಂದು ಅವರು ಹೇಳಿದರು.

“ಅವಳ ಮುಖವನ್ನು ನೋಡುತ್ತಿರುವಾಗ , ಉಸ್ತಾದರು ಕುಳಿತಿದ್ದ ವೇದಿಕೆಯ ಮೇಲೆ ಬರಲು ಹುಡುಗಿ ನಾಚಿಕೆಪಡುತ್ತಾಳೆ ಎಂದು ವಿದ್ವಾಂಸರು ಭಾವಿಸಿದರು. ವೇದಿಕೆಗೆ ಆಹ್ವಾನಿಸಿದರೆ ಇತರ ಹುಡುಗಿಯರು ಸಹ ಅದೇ ಭಯವನ್ನು ಹೊಂದಬಹುದು ಎಂದು ಅವರು ಭಾವಿಸಿದರು. ಹೀಗಾಗಿ ಇಂತಹ ಹುಡುಗಿಯರನ್ನು ವೇದಿಕೆಗೆ ಕರೆಯಬೇಡಿ ಎಂದು ಸಂಘಟಕರನ್ನು ಕೋರಿದರು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next