Advertisement

ಜಮ್ಮು-ಕಾಶ್ಮೀರವನ್ನು ಭಾರತ ಆಕ್ರಮಿತ ಎಂದು ವಿವಾದ ಸೃಷ್ಟಿಸಿದ ಕೇರಳ ಶಾಸಕ!

09:41 PM Aug 12, 2022 | Team Udayavani |

ತಿರುವನಂತಪುರ: ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ಕೇರಳದ ಸಿಪಿಎಂ ಶಾಸಕ ಕೆ.ಟಿ.ಜಲೀಲ್‌ ವಿವಾದಕ್ಕೆ ಸಿಲುಕಿದ್ದಾರೆ.

Advertisement

ಜಲೀಲ್‌ ಅವರು, “ಪಾಕಿಸ್ತಾನಕ್ಕೆ ಸೇರಿರುವ ಕಾಶ್ಮೀರವನ್ನು ಆಜಾದ್‌ ಕಾಶ್ಮೀರ ಎನ್ನಲಾಗುತ್ತದೆ. ಆ ಪ್ರದೇಶದಲ್ಲಿ ಪಾಕಿಸ್ತಾನದ ಸರ್ಕಾರಕ್ಕೆ ನೇರ ನಿಯಂತ್ರಣವಿಲ್ಲ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಜಮ್ಮು, ಕಾಶ್ಮೀರ ಕಣಿವೆ ಮತ್ತು ಲಡಾಖ್‌ ಇದೆ’ ಎಂದು ಮಲಯಾಳಂ ಭಾಷೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಚಾರವಾಗಿ ಭಾರೀ ವಿರೋಧ ವ್ಯಕ್ತವಾಗಿದೆ.

ಬಿಜೆಪಿಯ ನಾಯಕ ಸಂದೀಪ್‌ ವೇರಿಯೆರ್‌ ಹೇಳಿಕೆಯನ್ನು ಖಂಡಿಸಿದ್ದು, “ಇದು ತುಂಬ ಗಂಭೀರವಾದ ವಿಚಾರ. ಅವರು ಹೇಳಿಕೆಯು ಅವರ ನಿಜವಾದ ಚಿಂತನೆಯನ್ನು ತೋರಿಸುತ್ತಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next