Advertisement

ಪತ್ರಿಕಾಗೋಷ್ಠಿಯಿಂದ ಎರಡು ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಿದ ಕೇರಳ ರಾಜ್ಯಪಾಲ

10:04 PM Nov 07, 2022 | Team Udayavani |

ಕೊಚ್ಚಿ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಅವರು ಸೋಮವಾರ ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಿದ್ದಾರೆ.

Advertisement

ಈ ಕುರಿತು ಮಾತನಾಡಿದ ಆರಿಫ್, “ನಾನು ಮಾಧ್ಯಮವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಿದ್ದೇನೆ. ಯಾವಾಗಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದೇನೆ. ಆದರೆ ಮುಖವಾಡ ಧರಿಸಿರುವ ಮಾಧ್ಯಮವನ್ನು ನಾನು ಪ್ರೋತ್ಸಾಹಿಸುವುದಿಲ್ಲ,’ ಎಂದರು.

“ಮಲಯಾಳಂ ಚಾನಲ್‌ಗ‌ಳಾದ ಕೈರಾಲಿ ಮತ್ತು ಮೀಡಿಯಾ ಒನ್‌ನ ವರದಿಗಾರರು ಪತ್ರಿಕಾಗೋಷ್ಠಿಯಿಂದ ಹೊರಹೋಗಬಹುದು. ಇವು ಮಾಧ್ಯಮವಲ್ಲ. ಮುಖವಾಡ ಧರಿಸಿದ ಮಾಧ್ಯಮ. ಇವು ಮೂಲತಃ ರಾಜಕೀಯ ಸಂಸ್ಥೆಗಳು. ಹೀಗಾಗಿ ನಾನು ಇವುಗಳಿಗೆ ಪ್ರತಿಕ್ರಿಯಿಸುವುದಿಲ್ಲ,’ ಎಂದು ಖಾರವಾಗಿ ಹೇಳಿದರು.

ಅ.24ರಂದು ಈ ಎರಡು ಚಾನೆಲ್‌ಗ‌ಳು ಸೇರಿದಂತೆ ಒಟ್ಟು ನಾಲ್ಕು ಮಲಯಾಳಂ ಚಾನಲ್‌ಗ‌ಳನ್ನು ಸುದ್ದಿಗೋಷ್ಠಿಗೆ ಹಾಜರಾಗದಂತೆ ಕೇರಳ ರಾಜಭವನ ನಿಷೇಧಿಸಿತ್ತು. ಕೈರಾಲಿ ನ್ಯೂಸ್‌ ಚಾನೆಲ್‌ ಮಾಲೀಕ ಸಿಪಿಎಂ ನಾಯಕರಾಗಿದ್ದಾರೆ. ಅಲ್ಲದೇ ಸೆಕ್ಯೂರಿಟಿ ಕ್ಲಿಯರೆನ್ಸ್‌ ಸಮಸ್ಯೆ ಹಿನ್ನೆಲೆಯಲ್ಲಿ ಮೀಡಿಯಾ ಒನ್‌ ಚಾನೆಲ್‌ ಕೇಂದ್ರ ಸರ್ಕಾರದಿಂದ ನಿಷೇಧ ಎದುರಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next