Advertisement

ಕೇರಳದ ಮಾಜಿ ಸಚಿವ ಪ್ರೊ.ಎನ್‌.ಎಂ ಜೋಸೆಫ್ ನಿಧನ

07:22 PM Sep 13, 2022 | Team Udayavani |

ಕೊಟ್ಟಾಯಂ: ಜನತಾದಳದ ಹಿರಿಯ ನಾಯಕ, ಕೇರಳದ ಮಾಜಿ ಸಚಿವ ಪ್ರೊ.ಎನ್‌.ಎಂ.ಜೋಸೆಫ್ (79) ಅವರು ಮಂಗಳವಾರ ನಿಧನರಾಗಿದ್ದಾರೆ.

Advertisement

1987ರಿಂದ 1991ರ ವರೆಗೆ ಅಧಿಕಾರದಲ್ಲಿ ಇದ್ದ ಇ.ಕೆ.ನಾಯನಾರ್‌ ಸರ್ಕಾರದಲ್ಲಿ ಅರಣ್ಯ ಖಾತೆ ಸಚಿವರಾಗಿದ್ದರು. ಅವರು ಕೊಟ್ಟಾಯಂ ಜಿಲ್ಲೆಯ ಪಾಲಾ ಎಂಬಲ್ಲಿ ಇರುವ ಸೈಂಟೈ ಥಾಮಸ್‌ ಕಾಲೇಜಿನಲ್ಲಿ ಇಕನಾಮಿಕ್ಸ್‌ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದರು.

ಜೋಸೆಫ್‌ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ. ಜೋಸೆಫ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next