Advertisement

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

07:09 PM Aug 19, 2022 | Team Udayavani |

ಕಲ್ಲಿಕೋಟೆ: ಇತ್ತೀಚೆಗಷ್ಟೇ ಕೇರಳದ ಸಾಮಾಜಿಕ ಕಾರ್ಯಕರ್ತ, ಲೇಖಕ ಸಿವಿಕ್‌ ಚಂದ್ರನ್‌ ಪರವಾಗಿ ವಿವಾದಾತ್ಮಕ ತೀರ್ಪು ನೀಡಿದ್ದ; ಕಲ್ಲಿಕೋಟೆಯ ಸೆಷನ್ಸ್‌ ನ್ಯಾಯಾಧೀಶ ಎಸ್‌.ಕೃಷ್ಣಕುಮಾರ್‌ ಇನ್ನೊಂದು ವಿವಾದಾತ್ಮಕ ತೀರ್ಪು ನೀಡಿದ್ದು ಬೆಳಕಿಗೆ ಬಂದಿದೆ.

Advertisement

ಕೆಲವು ದಿನಗಳ ಹಿಂದೆ, ಯುವ ಬರಹಗಾರ್ತಿಯೊಬ್ಬರು ಪ್ರಚೋದನಾತ್ಮಕ ಬಟ್ಟೆ ಧರಿಸಿದ್ದ ಕಾರಣ, ಲೈಂಗಿಕ ಕಿರುಕುಳದ ಆರೋಪ ಮಾಡಿರುವುದು ಸರಿಯಲ್ಲ ಎಂದು ನ್ಯಾ.ಕೃಷ್ಣಕುಮಾರ್‌ ತೀರ್ಪು ನೀಡಿದ್ದರು. ಜೊತೆಗೆ ಸಿವಿಕ್‌ ಚಂದ್ರನ್‌ಗೆ ಜಾಮೀನು ನೀಡಿದ್ದರು. ಇದೇ ರೀತಿಯ ಲೈಂಗಿಕ ಕಿರುಕುಳದ ದೂರನ್ನು ದಲಿತ ಲೇಖಕಿಯೊಬ್ಬರು ಹಿಂದೆಯೇ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಕೃಷ್ಣಕುಮಾರ್‌ ಅವರು, ಸಿವಿಕ್‌ ಚಂದ್ರನ್‌ ಜಾತಿವ್ಯವಸ್ಥೆ ವಿರುದ್ಧ ಹೋರಾಡುತ್ತಿರುವ ವ್ಯಕ್ತಿ.

ಸಾಮಾಜಿಕ ಸುಧಾರಣೆ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರು ಎದುರಿಗಿರುವ ಮಹಿಳೆ ದಲಿತ ಸಮುದಾಯಕ್ಕೆ ಸೇರಿದ್ದವರು ಎಂದು ಗೊತ್ತಿದ್ದ ಮೇಲೂ, ಅವರ ಶರೀರವನ್ನು ಮುಟ್ಟಲು ಸಾಧ್ಯವೇ ಎಂದು ಹೇಳಿದ್ದರು!

ಈ ಎರಡೂ ತೀರ್ಪುಗಳು ಈಗ ಕೇರಳದಲ್ಲಿ ಬಹಳ ವಿವಾದ ಹುಟ್ಟಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next