Advertisement

ಪ್ರಧಾನಿ ಮೋದಿಯನ್ನು ಹೊಗಳಿದ್ದೇಕೆ?ವಿವರಣೆ ಕೊಡಿ-ಶಶಿ ತರೂರ್ ಗೆ ಕಾಂಗ್ರೆಸ್ ನೋಟಿಸ್!

09:35 AM Aug 28, 2019 | Nagendra Trasi |

ತಿರುವನಂತಪುರಂ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಕೇರಳ ಕಾಂಗ್ರೆಸ್ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕ್ರಮದ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.

Advertisement

ನರೇಂದ್ರ ಮೋದಿ ಅವರನ್ನು ಯಾವ ಕಾರಣಕ್ಕೆ ಹೊಗಳಿದ್ದು ಎಂಬ ಬಗ್ಗೆ ನಾವು ಶಶಿ ತರೂರ್ ಬಳಿ ವಿವರಣೆ ಕೇಳಿದ್ದೇವೆ. ಅವರು ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಾಪ್ಪಲೈ ರಾಮಚಂದ್ರನ್ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದಾಗ ನಾವು ಹೊಗಳಬೇಕು. ಪದೇ, ಪದೇ ಎಲ್ಲಾ ವಿಚಾರದಲ್ಲಿಯೂ ಟೀಕಿಸುವುದು ಸರಿಯಲ್ಲ ಎಂದು ಶಶಿ ತರೂರ್ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ತರೂರ್ ಹೇಳಿಕೆಯಿಂದ ಕೇರಳ ಕಾಂಗ್ರೆಸ್ ಅಸಮಾಧಾನಗೊಂಡಿದೆ.

ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್, ಅಭಿಷೇಕ್ ಮನು ಸಿಂಘ್ವಿ ಕೂಡಾ ಪ್ರಧಾನಿ ನರೇಂದ್ರ ಮೋದಿಯನ್ನು ಪದೇ, ಪದೇ ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿಕೆ ನೀಡಿದ್ದರು. ಬಳಿಕ ಟ್ವೀಟ್ ಮಾಡಿದ್ದ ಶಶಿ ತರೂರ್, ನಾನು ಆರು ವರ್ಷಗಳ ಹಿಂದೆಯೇ ಹೇಳಿದ್ದೆ…ಆದರೆ ನಿಮಗೆ ಈಗ ಮನವರಿಕೆಯಾಗಿದೆ. ಒಳ್ಳೆಯ ಕೆಲಸ ಮಾಡಿದಾಗ ನಾವು ಮೋದಿಯನ್ನು ಹೊಗಳಬೇಕು. ತಪ್ಪು ಮಾಡಿದಾಗ ಟೀಕಿಸಬೇಕು. ಈ ನಿಟ್ಟಿನಲ್ಲಿ ಬಂದ ಹೇಳಿಕೆಯನ್ನು ತಾನು ಸ್ವಾಗತಿಸುವುದಾಗಿ ಉಲ್ಲೇಖಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next