Advertisement

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

08:51 PM Sep 25, 2021 | Team Udayavani |

ಕಾರ್ಕಳ: ಕೇರಳ ರಾಜ್ಯ ಬಿಜೆಪಿ ವಕ್ತಾರ ಸಂದೀಪ್‌ ಜಿ. ವಾರಿಯರ್‌ ಕಾರ್ಕಳ ಬಿಜೆಪಿ ಕಚೇರಿಗೆ ಶನಿವಾರ ಭೇಟಿ ನೀಡಿ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

Advertisement

ಕೇರಳದಲ್ಲಿ ಬಿಜೆಪಿ ಬಲ ವೃದ್ಧಿಯಾಗಿದ್ದು, ಇತರ ಪಕ್ಷಗಳಿಗೆ ಸಮಸ್ಯೆಯಾಗಿದೆ. ಉಗ್ರರ ಚಟುವಟಿಕೆ, ಮತಾಂತರ, ಲವ್‌ ಜೆಹಾದ್‌, ಇನ್ನಿತರ ರಾಷ್ಟ್ರ ವಿರೋಧಿಗಳನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸುವುದರಿಂದ ಹಾಗೂ ಕೇರಳದಲ್ಲಿ ಪ್ರಸ್ತುತವಿರುವ ಕೋವಿಡ್‌ ಗಂಭೀರ ಸಮಸ್ಯೆಯನ್ನು ಸಾಮಾನ್ಯ ಹಂತಕ್ಕೆ ತರುವಲ್ಲಿ ದೇಶದ ಪ್ರಧಾನಿ ಕೈಗೊಂಡ ನಿರ್ಣಯದಿಂದ ಪಕ್ಷವು ಕೇರಳದಲ್ಲಿ ಬಲಿಷ್ಠವಾಗುತ್ತಿದೆ.

ಇದನ್ನೂ ಓದಿ:ಬಿಜೆಪಿ ಸೇರಲು ಕಾಂಗ್ರೆಸ್ಸಿಗರು ತುದಿಗಾಲಿನಲ್ಲಿ ನಿಂತಿದ್ದಾರೆ : ಶಾಸಕ ರೇಣುಕಾಚಾರ್ಯ

ಮುಂದಿನ ದಿನಗಳಲ್ಲಿ ಕರ್ನಾಟಕದ ಹಾಗೆ ಕೇರಳದಲ್ಲಿಯೂ ಕೂಡ ಬಿಜೆಪಿ ಗಟ್ಟಿಯಾಗುವುದು ಎಂದರು ಎಂದರು. ಅವರು ಸಚಿವ ಸುನಿಲ್‌ ಕುಮಾರ್‌ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಕಳ ಬಿಜೆಪಿಯ ವಕ್ತಾರ ಕೆ.ಎಸ್‌. ಹರೀಶ್‌ ಶೆಣೈ, ಪುರಸಭೆ ಸದಸ್ಯ ಸಂತೋಷ್‌ ರಾವ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next