Advertisement

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

01:39 AM Apr 28, 2024 | Team Udayavani |

ತಿರುವನಂತಪುರ: ವಿಧಾನಸಭೆ ಒಪ್ಪಿಗೆ ನೀಡಿ, ಸುದೀರ್ಘ‌ ಅವಧಿಗೆ ಬಾಕಿ ಉಳಿದಿದ್ದ 5 ಮಸೂದೆಗಳಿಗೆ ಅಂಕಿತ ಹಾಕಿರುವುದಾಗಿ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌ ಶನಿವಾರ ಹೇಳಿದ್ದಾರೆ. ಭೂ ಹಂಚಿಕೆ ತಿದ್ದುಪಡಿ ಮಸೂದೆ, ಕೇರಳ ಸಹಕಾರಿ ಸಂಘಗಳ ತಿದ್ದುಪಡಿ ಕಾಯ್ದೆ, ಭತ್ತದ ಜೌಗು ಪ್ರದೇಶ ತಿದ್ದುಪಡಿ ಕಾಯ್ದೆ, ಡೇರಿ ಸಹಕಾರ ಮಸೂದೆ ಮತ್ತು ಅಬಕಾರಿ ಕಾನೂನು ತಿದ್ದುಪಡಿ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

Advertisement

ಈ ಮಸೂದೆಗಳಿಗೆ ಕೆಲವು ದಿನಗಳ ಹಿಂದೆಯೇ ಅಂಕಿತ ಹಾಕಲಾಗಿದ್ದು, ಈಗ ಮಾಹಿತಿ ನೀಡಲಾಗುತ್ತಿದೆ ಎಂದು ರಾಜ್ಯಪಾಲ ಆರೀಫ್ ಖಾನ್‌ ತಿಳಿಸಿದ್ದಾರೆ. ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಕೇರಳದ ಕಮ್ಯುನಿಸ್ಟ್‌ ಪಕ್ಷದ ಸರಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next