Advertisement

Kengeri ಉಪನಗರ- ಆರ್ವಿ ಕಾಲೇಜು ರಸ್ತೆ ಬಳಿ ಕಸದ ರಾಶಿ

12:54 PM Oct 26, 2024 | Team Udayavani |

ಕೆಂಗೇರಿ: ಕೆಂಗೇರಿ ಉಪನಗರದ ಹೊಯ್ಸಳ ವೃತ್ತ ದಿಂದ ಮೈಸೂರು ರಸ್ತೆಯ ಆರ್‌.ವಿ. ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಮಶಾನದ ಅಕ್ಕಪಕ್ಕಗಳ ರಸ್ತೆಗಳಲ್ಲಿ ಸುಮಾರು 15 ದಿನಗಳಿಂದ ರಾಶಿ ರಾಶಿ ಕಸ ಬಿದ್ದಿದೆ. ಇದರಿಂದ ಈ ಭಾಗದಲ್ಲಿ ಗಬ್ಬು ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕಾಡು ತ್ತಿದೆ. ಈ ಪ್ರದೇಶದಲ್ಲಿ ಹಲವು ಬಡಾವಣೆ, ಶಾಲೆಗಳಿದ್ದು, ಪ್ರತಿದಿನ ಶಾಲಾ ವಾಹನ ಹಾಗೂ ಖಾಸಗಿ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮುಗಿ ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

Advertisement

ಇತ್ತೀಚೆಗೆ ಸತತ ಮಳೆಯಾಗುತ್ತಿದ್ದು, ಕಸದ ರಾಶಿಗೆ ನೀರು ಸೇರಿಕೊಂಡು ದುರ್ವಾಸನೆ ಬೀರುತ್ತಿದೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿ ಲೋಕೇಶ್‌ ಸೇರಿದಂತೆ ಮತ್ತಿತರರು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕಸದ ರಾಶಿಯನ್ನು ವಿಲೇವಾರಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next