Advertisement

ಕೆಂಪೇಗೌಡ ಪ್ರತಿಮೆ ಅನಾವರಣ ಬಿಜೆಪಿ ಕಾರ್ಯಕ್ರಮವಾಗಿತ್ತು: ಎಂ.ಬಿ. ಪಾಟೀಲ್ ವ್ಯಂಗ್ಯ

03:16 PM Nov 12, 2022 | Team Udayavani |

ಬೆಂಗಳೂರು: ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ವಿಪಕ್ಷದ ನಾಯಕರನ್ನು ಶಿಷ್ಟಾಚಾರದ ಪ್ರಕಾರ ಕರೆಯದೇ ಇದ್ದದ್ದು ತಪ್ಪು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಪ್ರಜಾಪ್ರಭುತ್ವದಲ್ಲಿ ವಿಪಕ್ಷ ನಾಯಕರಿಗೆ ಕೆಲವೊಂದು ಹಕ್ಕು ಇದೆ. ಅವುಗಳ ಉಲ್ಲಂಘನೆ ಆಗಿದೆ. ದೇವೇಗೌಡರಿಗೆ ಆಹ್ವಾನ ಕೂಡ ನೀಡಿಲ್ಲ. ಕೆಂಪೇಗೌಡ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮ ಆಗಿತ್ತು ಎಂದು ವ್ಯಂಗ್ಯ ವಾಡಿದರು.

ಕೆಂಪೇಗೌಡ ಒಂದೇ ಸಮುದಯಕ್ಕೆ ಸೇರಿದವರಲ್ಲ. ಅವರನ್ನು ಒಂದು ಜಾತಿಗೆ ಸೇರಿಸುತ್ತಿರುವುದು ತಪ್ಪ. ಈ ವಿಮಾನ ನಿಲ್ದಾಣವಾಗುವುದಕ್ಕೆ ಎಸ್.ಎಂ. ಕೃಷ್ಣ ಪ್ರಮುಖ ಕಾರಣ. ಅವರಿಗೂ ಆಹ್ವಾನ ನೀಡಬೇಕಿತ್ತು. ಕೆಂಪೇಗೌಡ ಈ ನಾಡಿನ ಆಸ್ತಿ, ಎಲ್ಲರನ್ನೂ ಕರೆದು ಹಬ್ಬದ ರೀತಿಯಲ್ಲಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ವಿಧಾನಸೌಧ ಮುಂದೆ ಬಸವಣ್ಣ ಪ್ರತಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಚರ್ಚೆ ಬಹಳ ದಿನಗಳಿಂದ ಇದೆ. ಬಸವಣ್ಣ ಈ ನಾಡಿನ ಆಸ್ತಿ. ಅವರ ಪ್ರತಿಮೆ ಆದಷ್ಟು ಬೇಗ ಆಗಬೇಕು. ಒಂದು ಸಮುದಾಯಕ್ಕೆ ‌ಸಿಮೀತವಾದ ವ್ಯಕ್ತಿ ಬಸವಣ್ಣ ಅಲ್ಲ. ಹಲವು ಮಹಾತ್ಮರು ಈ ನಾಡಿನಲ್ಲಿ ‌ಇದ್ದಾರೆ. ಕನಕದಾಸರು, ಕುವೆಂಪು, ರಾಣಿ ಚೆನ್ನಮ್ಮ.. ಇನ್ನೂ ಅನೇಕ ಮಹಾತ್ಮರು ಇದ್ದಾರೆ. ಅವರ ಪ್ರತಿಮೆಗೆಳನ್ನು ಸಹ ಸರ್ಕಾರ ಬೇರೆ ಜಾಗದಲ್ಲಿ ನಿರ್ಮಿಸಲಿ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next