Advertisement

ಕೆಂಪೇಗೌಡ ಜಯಂತಿಗೆ ಜವಳಿನಗರಿ ಅದ್ದೂರಿ ಸಿದ್ಧತೆ

12:25 PM Jul 03, 2022 | Team Udayavani |

ಗುಡಿಬಂಡೆ: ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ಆಡಳಿತ ಮತ್ತು ಒಕ್ಕಲಿಗರ ಸಂಘದ ವತಿಯಿಂದ ನಡೆಯಲಿರುವ ನಾಡಪ್ರಭು ಕೆಂಪೇಗೌಡ ಜಯಂತಿಗೆ ಜವಳಿನಗರಿ ಗುಡಿಬಂಡೆ ಅದ್ದೂರಿಯಾಗಿ ಸಿದ್ದ ಗೊಂಡಿದೆ.

Advertisement

ಈ ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಂ ಟಿ ಬಿ ನಾಗರಾಜ್, ಎಂ.ಎಲ್.ಸಿ ಗಳಾದ ವೈ.ಎ. ನಾರಾಯಣಸ್ವಾಮಿ, ಅನಿಲ್ ಕುಮಾರ್, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸೇರಿದಂತೆ ಅನೇಕ ಪ್ರಮುಖ ಗಣ್ಯ ವ್ಯಕ್ತಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಜವಳಿನಗರಿ ಗುಡಿಬಂಡೆ ಅದ್ದೂರಿಯಾಗಿ ಸಿಂಗಾರಗೊಂಡು ಸುಮಾರು 80ಕ್ಕೂ ಹೆಚ್ಚು ಬೆಳ್ಳಿ ರಥಗಳು, ಕಲಾ ತಂಡಗಳು ಗಣ್ಯರಿಗೆ ಸ್ವಾಗತ ಕೊರಲು ಸಿದ್ಧಗೊಂಡರೆ, ವೇದಿಕೆಯ ಬಳಿ ರೈತರು ದವಸ ಧಾನ್ಯಗಳಿಂದ ವೇದಿಕೆಯನ್ನು ಸಿಂಗರಿಸಿ ಇನ್ನು ಹೆಚ್ಚು ಆಕರ್ಷಣೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next