Advertisement

ಸಿಂಗಾಪುರ ಪ್ರವಾಸ: ಪ್ರಧಾನಿ ಮೋದಿಗೆ ಪತ್ರ ಬರೆದ ಕೇಜ್ರಿವಾಲ್‌ 

09:05 PM Jul 17, 2022 | Team Udayavani |

ನವದೆಹಲಿ: ಸಿಂಗಾಪುರದಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ “ವಿಶ್ವ ನಗರಗಳ ಶೃಂಗಸಭೆ’ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಆಹ್ವಾನವಿದ್ದು, ಅದಕ್ಕೆ ತೆರಳಲು ವೀಸಾ ತಡೆಹಿಡಿಯದೆ ಅನುಮತಿ ಕೊಡಬೇಕೆಂದು ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

Advertisement

“ದೆಹಲಿ ಸರ್ಕಾರದ ಮಾದರಿಯನ್ನು ವಿಶ್ವ ವೇದಿಕೆಯಲ್ಲಿ ಪ್ರಸ್ತುತಪಡಿಸುವುದು ದೊಡ್ಡ ಅವಕಾಶ. ಆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮುಖ್ಯಮಂತ್ರಿಯನ್ನು ತಡೆಯುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಕೇಜ್ರಿವಾಲ್‌ ಅವರ ಸಿಂಗಾಪುರ ಪ್ರವಾಸದ ಕಡತಕ್ಕೆ ಇನ್ನೂ ಸಹಿ ಹಾಕಿಲ್ಲ ಎಂದು ಮೂಲಗಳು ತಿಳಿಸಿವೆ.ಆ ಹಿನ್ನೆಲೆ ಅವರು ಪ್ರಧಾನಿ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next