Advertisement

ಕೇಜ್ರಿವಾಲ್‌ ಗಿಲ್ಲ ರಿಲೀಫ್: ಮಧ್ಯಾಂತರ ಜಾಮೀನು ಅರ್ಜಿ ಆದೇಶ ಜೂ.5ಕ್ಕೆ

12:52 AM Jun 02, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿ ಮಧ್ಯಾಂತರ ಜಾಮೀನು ಕೋರಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ಕುರಿತಾದ ಆದೇಶವನ್ನು ದಿಲ್ಲಿ ನ್ಯಾಯಾಲಯ ಜೂ.5ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ರವಿವಾರ ಕೇಜ್ರಿವಾಲ್‌ ಅವರು ಜೈಲಿಗೆ ವಾಪಸಾಗುವುದು ಖಾತರಿಯಾಗಿದೆ.

Advertisement

ಮಧ್ಯಾಂತರ ಜಾಮೀನು ಕೋರಿದ್ದ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್‌ 21 ದಿನಗಳ ಜಾಮೀನು ನೀಡಿತ್ತು. ಶನಿವಾರಕ್ಕೆ ಅವಧಿ ಪೂರ್ಣಗೊಂಡಿದ್ದು, ರವಿವಾರ ಕೇಜ್ರಿವಾಲ್‌ ಮತ್ತೆ ಪೊಲೀಸರಿಗೆ ಶರಣಾಗಬೇಕಿದೆ. ಏತನ್ಮಧ್ಯೆ, ಅನಾರೋಗ್ಯದ ಕಾರಣ ನೀಡಿ ಸ್ಥಳೀಯ ನ್ಯಾಯಾಲಯದಲ್ಲಿ ಮತ್ತೂಂದು ಮಧ್ಯಾಂತರ ಅರ್ಜಿ ದಾಖಲಿಸಲಾಗಿತ್ತು. ಸದ್ಯ ನ್ಯಾ| ಕಾವೇರಿ ಬವೇಜಾ ಅರ್ಜಿಯ ಆದೇಶ ಕಾಯ್ದಿರಿಸಿದ್ದಾರೆ.

ಕೇಜ್ರಿವಾಲ್‌ಗಾಗಿ ಆ್ಯಂಬುಲೆನ್ಸ್‌ ಕಳುಹಿಸಿದ ಬಿಜೆಪಿ ನಾಯಕ!
ದಿಲ್ಲಿ ಸಿಎಂಗೆ ಆರೋಗ್ಯ ಸಮಸ್ಯೆಯಿದೆ ಎಂದು ಪಕ್ಷ ಹೇಳಿದ ಬಳಿಕ ಕೇಜ್ರಿವಾಲ್‌ ಆಸ್ಪತೆಗೆ ತೆರಳಲಿ ಎಂದು ಬಿಜೆಪಿ ಹಿರಿಯ ನಾಯಕ ವಿಜಯ್‌ ಗೋಯಲ್‌ ಆ್ಯಂಬುಲೆನ್ಸ್‌ ಕಳುಹಿಸಿದ್ದಾರೆ! ಅದಾಗ್ಯೂ ದಿಲ್ಲಿ ಪೊಲೀಸರು ಆ್ಯಂಬುಲೆನ್ಸ್‌ ಅನ್ನು ದಾರಿಮಧ್ಯೆ ತಡೆದಿದ್ದಾರೆ. ಜನರ ಅನುಕಂಪಕ್ಕಾಗಿ ಕೇಜ್ರಿ ಆರೋಗ್ಯದ ವಿಚಾರದಲ್ಲಿ ನಾಟಕ ವಾಡುತ್ತಿದ್ದಾರೆ ಎಂದು ಗೋಯಲ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next