Advertisement
ಎನ್ಡಿಎ ಬಲಿಷ್ಠ: ತಮಿಳುನಾಡಿನ ಈರೋಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎನ್ಡಿಎ ಬಲಿಷ್ಠವಾಗಿದೆ. ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಪ್ರಬಲ ನಾಯಕನಿಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ಉತ್ತರಾಖಂಡದ ರುದ್ರಪುರದಲ್ಲಿನ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಫೋನ್ ಮೂಲಕ ಮಾತನಾಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಆಗಮಿಸಿದ್ದ ಅವರು 11 ಗಂಟೆಗೆ ರುದ್ರಪುರಕ್ಕೆ ಹೆಲಿಕಾಪ್ಟರ್ನಲ್ಲಿ ತೆರಳಬೇಕಾಗಿತ್ತು. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಅವರು ಡೆಹ್ರಾಡೂನ್ ಏರ್ಪೋರ್ಟ್ನಲ್ಲಿ ಉಳಿಯಬೇಕಾಯಿತು. ಬಳಿಕ ಫೋನ್ ಮೂಲಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಸ್ಥಳೀಯರ ಕ್ಷಮೆ ಕೋರಿದರು.
Related Articles
ಗುಜರಾತ್ನ ವಲ್ಸಾಡ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಿರುವ ವೇಳೆ ವೇದಿಕೆ ಏರಿದ ಮಹಿಳಾ ಘಟಕದ ಕಾರ್ಯಕರ್ತೆ ಗಲ್ಲಕ್ಕೆ ಮುತ್ತಿಕ್ಕಿದ್ದಾರೆ. ಇದೊಂದು ಏಕಾಏಕಿಯ ನಿರ್ಧಾರ ಎಂದು ಅನಂತರ ತಿಳಿಸಿದ್ದಾರೆ. ರ್ಯಾಲಿ ಶುರುವಾಗುವ ಮೊದಲು 4-5 ಮಂದಿ ಇದ್ದ ಗುಂಪು ವೇದಿಕೆ ಏರಿತು. ರಾಹುಲ್ಗೆ ಹಾರ ಹಾಕುವ ಮುನ್ನ ಮಹಿಳೆ ಅವರಿಗೆ ಮುತ್ತಿಕ್ಕಿದರು. ಈ ಫೋಟೋ, ವಿಡಿಯೋ ವೈರಲ್ ಆಗಿದೆ.
Advertisement