Advertisement

ಕೆದೂರು: ರೈಲ್ವೆ ಟ್ರ್ಯಾಕ್ ಬಳಿ ಅವಿವಾಹಿತ ಪುರುಷನ ಶವ ಪತ್ತೆ

10:49 AM Jul 15, 2022 | Team Udayavani |

ಕೆದೂರು: ಮುಂಬಯಿನಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಕೆರೂರು ಬಳಿ ತಡರಾತ್ರಿ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.

Advertisement

ಡೋಂಗ್ರೇ ಕೆರೆ ನಿವಾಸಿ ನಿತ್ಯಾಂನಂದ ಶೇಟ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ನಿತ್ಯಾನಂದ ಅವರು ಅವಿವಾಹಿತರಾಗಿದ್ದು, ಮುಂಬಯಿನಲ್ಲಿ ಸಮಾರಂಭವೊಂದರಲ್ಲಿ ಭಾಗಿಯಾಗಿ, ಮಂಗಳೂರು ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಮುಂಜಾನೆ ವೇಳೆ ರೈಲು ಸಿಬಂದಿ ರೈಲು ಮಾರ್ಗ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸ್ಥಳೀಯರೊಬ್ಬರಿಗೆ ನಿತ್ಯಾನಂದ ಅವರ ಮೊಬೈಲ್‌ ಫೋನ್‌ ಸಿಕ್ಕಿದ್ದು, ಮೊಬೈಲ್‌ ಸ್ವಿಚ್ಛ್‌ ಆನ್‌ ಮಾಡಿದಾಗ ನಿತ್ಯಾನಂದ ಅವರ ಕುಟುಂಬಸ್ಥರಿಂದ ಕರೆ ಬಂದಿದ್ದು, ಅವರಿಗೆ ಮಾಹಿತಿ ತಿಳಿಸಲಾಗಿದೆ.

Advertisement

ಇದನ್ನೂ ಓದಿ: ಭಾರೀ ಮಳೆ: ಶೃಂಗೇರಿ-ಆಗುಂಬೆ ಸಂಪರ್ಕ ರಸ್ತೆ ಸಂಪೂರ್ಣ ಕಡಿತ : ಹಲವೆಡೆ ಶಾಲೆಗಳಿಗೆ ರಜೆ

ಘಟನೆ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಠಾಣಾಧಿಕಾರಿ ಮಧು ಹಾಗೂ ಸಿಬಂದಿಗಳಾದ ಸಂತೋಷ, ರಾಘವೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next