Advertisement

ಬಿಆರ್‌ಎಸ್ ನಲ್ಲಿ ಬಿರುಕು ? ಹಲವು ಪ್ರಶ್ನೆ ಹುಟ್ಟು ಹಾಕಿದ ಕವಿತಾ ಗೈರು

05:20 PM Oct 06, 2022 | Team Udayavani |

ಹೈದರಾಬಾದ್ :ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಹಿರಿಯ ನಾಯಕಿ ಕೆ ಕವಿತಾ ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ರಾಷ್ಟ್ರೀಯ ವೇದಿಕೆ ಘೋಷಣೆ ಕಾರ್ಯಕ್ರಮಕ್ಕೆ ಗೈರುಹಾಜರಾಗಿರುವುದು ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದೆಯೇ ಎಂಬ ಬಗ್ಗೆ ಹೆಚ್ಚಿನ ಊಹಾಪೋಹಗಳನ್ನು ಹುಟ್ಟುಹಾಕಿದೆ.

Advertisement

`ದೊಡ್ಡ ಮಟ್ಟದ ಕಾರ್ಯಕ್ರಮದಿಂದ ಕವಿತಾ ಅವರು ಕಾಣಿಸಿಕೊಳ್ಳದೇ ಇರುವುದು ಮಾತ್ರವಲ್ಲದೆ, ಮುಂಬರುವ ಮುನುಗೋಡು ಉಪಚುನಾವಣೆಯ ಬಿಆರ್‌ಎಸ್ ಉಸ್ತುವಾರಿಗಳ ಪಟ್ಟಿಯಿಂದಲೂ ಅವರ ಹೆಸರು ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಬುಧವಾರ, ದಸರಾ ಸಂದರ್ಭದಲ್ಲಿ ರಾಷ್ಟ್ರೀಯವಾಗಿ ಹೋಗಲು ಬಿಆರ್‌ಎಸ್ ಎಂದು ಹೆಸರು ಬದಲಾಯಿಸಿಕೊಂಡ ಟಿಆರ್ ಎಸ್ ಪಕ್ಷಕ್ಕೆ ಅಸಾದುದ್ದೀನ್ ಓವೈಸಿಯ ಎಐಎಂಐಎಂ ಮತ್ತು ಜೆಡಿ (ಎಸ್) ನಂತಹ ಪ್ರಾದೇಶಿಕ ಪಕ್ಷಗಳ ಬೆಂಬಲ ಘೋಷಿಸಿವೆ.

ವಾಸ್ತವವಾಗಿ, ಟಿಆರ್‌ಎಸ್ ನಾಯಕಿ ಕವಿತಾ ಅವರು ತನ್ನ ಮನೆಯಲ್ಲಿ ದಸರಾ ಆಚರಿಸಲು ಆದ್ಯತೆ ನೀಡಿದ್ದು, ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತಿರುವ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next