Advertisement

ನೀತಿ ಆಯೋಗದ ಸಭೆಗೆ ಕೆ.ಚಂದ್ರಶೇಖರ್‌ ರಾವ್‌ ಗೈರು

09:07 PM Aug 06, 2022 | Team Udayavani |

ನವದೆಹಲಿ: ಭಾನುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿಯ 7ನೇ ಸಭೆಯಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಭಾಗವಹಿಸುತ್ತಿಲ್ಲ.

Advertisement

ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ತೋರಿಸುವ ನಿಟ್ಟಿನಲ್ಲಿ ಅವರು ಸಭೆಗೆ ಗೈರಾಗುತ್ತಿರುವುದಾಗಿ ಶನಿವಾರ ತಿಳಿಸಿದ್ದಾರೆ.

“ನೀತಿ ಆಯೋಗದ ಪ್ರಯೋಜನವನ್ನು ಗರಿಷ್ಠ ಜನರಿಗೆ ತಲುಪಿಸುವುದಕ್ಕೆ ಯೋಜನೆಗಳನ್ನು ರೂಪುಗೊಳ್ಳಿಸಲು ಮತ್ತು ಬದಲಾವಣೆ ತರುವುದಕ್ಕೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುಮತಿ ನೀಡಿಲ್ಲ. ಹಾಗಾಗಿ ಸಭೆಯಲ್ಲಿ ಭಾಗವಹಿಸುವುದರಿಂದ ಪ್ರಯೋಜನವಿಲ್ಲ’ ಎಂದು ಕೆಸಿಆರ್‌ ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next