Advertisement

ಮಾಜಿ ಸಂಸದ ಎಚ್ ಜಿ ರಾಮುಲು ಭೇಟಿಯಾದ ಕೆ ಸಿ ಕೊಂಡಯ್ಯ

05:30 PM Nov 24, 2021 | Team Udayavani |

ಗಂಗಾವತಿ: ಎಂಎಲ್ ಸಿ ಚುನಾವಣೆ ಬಳ್ಳಾರಿ – ವಿಜಯನಗರ ಕ್ಷೇತ್ರದ ಸ್ಪರ್ಧೆ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ  ಅವರು ಮಾಜಿ ಸಂಸದ ಹಿರಿಯ ಕಾಂಗ್ರೆಸ್ ಮುಖಂಡ ಎಚ್ ಜಿ ರಾಮುಲು ಅವರ ನಿವಾಸಕ್ಕೆ ಭೇಟಿ ನೀಡಿದರು.

Advertisement

ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲುವು ಪಡೆಯಲು ತಾವು ಆಶೀರ್ವಾದ ಮಾಡುವಂತೆ ಕೆ.ಸಿ. ಕೊಂಡಯ್ಯ ಎಚ್ .ಜಿ .ರಾಮುಲು ಅವರಲ್ಲಿ ಮನವಿ ಮಾಡಿದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಾಗೂ ದೇಶದಲ್ಲಿ ರೈತರು ಕೃಷಿ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ನಿರ್ಲಕ್ಷ್ಯ ಮನೋಭಾವನೆ ತಾಳಿದ್ದು ಗ್ರಾ ಪಂ ಜಿ ಪಂ ತಾ ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರ ಮೊಟಕುಗೊಳಿಸಲಾಗಿದೆ. ಚುನಾವಣೆಗೆ ಹೆದರಿ ಜಿಪಂ ತಾಪಂ ಚುನಾವಣೆಯನ್ನು  ವಿನಾಹ ಕಾರಣ ಮುಂದೂಡಲಾಗಿದೆ.ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಪಡೆಯಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಎಚ್ ಜಿ ರಾಮುಲು ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಮುಖಂಡರಾದ ಕೆ.ಕಾಳಪ್ಪ, ಶೇಖ್ ಇಲಿಯಾಸ್ ಬಾಬಾ ಸೇರಿ ಅನೇಕರಿದ್ದರು .

Advertisement
Advertisement

Udayavani is now on Telegram. Click here to join our channel and stay updated with the latest news.

Next