Advertisement

ಕಾವೂರು: ಬಿಜೆಪಿ ಕಾರ್ಯಕರ್ತರ ಸಭೆ

06:07 PM Apr 12, 2019 | Sriram |

ಕಾವೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎ. 13ರಂದು ಮಂಗಳೂರು ಕೇಂದ್ರ ಮೈದಾನದಲ್ಲಿ ಚುನಾವಣೆ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ಸಮಾಲೋಚನ ಸಭೆಯು ನಡೆಯಿತು.

Advertisement

ಶಾಸಕ ಹಾಗೂ ಬಿಜೆಪಿಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ದ.ಕ. ಜಿಲ್ಲಾ ಚುನಾವಣಾ ಪ್ರಭಾರ ಸುನಿಲ್‌ ಕುಮಾರ್‌ ಇವರು ಸಮಾಲೋಚನ ಸಭೆಯಲ್ಲಿ ಮಾರ್ಗದರ್ಶನ ನೀಡಿದರು. ಮೋದಿಜಿಯವರ ಸಾಧನೆಗಳು ಹಾಗೂ ಅವರ ಕಾರ್ಯ ಶೈಲಿಯಿಂದ ದೇಶಕ್ಕೆ ದೊರಕಿದ ಗೌರವದ ಸ್ಥಾನಮಾನದ ವಿಷಯ ಹಾಗೂ ಮುಂದಿನ ದಿನಗಳಲ್ಲಿ ಭಾರತದ ಬೆಳವಣಿಗೆಗೆ ಪಕ್ಷದ ಯೋಚನೆ ಯೋಜನೆಗಳನ್ನು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರ ರ್ಯಾಲಿ ಅಗತ್ಯವಾಗಿದ್ದು, ಅದರ ಯಶಸ್ಸಿಗೆ ಕಾರ್ಯಕರ್ತರು ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕು ಎಂದು ಅವರು ತಿಳಿಸಿದರು.

ಮಂಗಳೂರು ವಿಭಾಗ ಸಹ ಪ್ರಭಾರ ಪ್ರತಾಪಸಿಂಹ ಇವರು ಸಂದಭೋìಚಿತವಾಗಿ ಮಾತನಾಡಿದರು. ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಕುಮಾರ್‌ ಬೆಳ್ತಂಗಡಿ, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ನಿತಿನ್‌ ಕುಮಾರ್‌, ಪೂಜಾ ಪೈ, ರಣದೀಪ್‌ ಕಾಂಚನ್‌ ಉಪಸ್ಥಿತರಿದ್ದರು.

ಶಾಸಕ ಡಾ| ವೈ.ಭರತ್‌ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರ ಉತ್ತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್‌ ಕೃಷ್ಣಾಪುರ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು. ಸುಧಾಕರ್‌ ಆಚಾ ರ್ಯ ಅಡ್ಯಾರ್‌, ಗಣೇಶ್‌ ಹೊಸಬೆಟ್ಟು, ತಿಲಕ್‌ರಾಜ್‌ ಕೃಷ್ಣಾಪುರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next