Advertisement

ಕಾವೇರಿ ನಿವಾಸಕ್ಕೆ ಸಿದ್ದು ಮರಳುವ ಸಾಧ್ಯತೆ

11:19 PM May 19, 2023 | Team Udayavani |

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸವನ್ನು ಹಿಂದಿನಂತೆ ಕಾವೇರಿಗೆ ಬದಲಾಯಿಸುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸದ್ಯದಲ್ಲೇ ಕಾವೇರಿಯಿಂದ ತಮ್ಮ ನಿವಾಸವನ್ನು ಡಾಲರ್ ಕಾಲನಿ ಧವಳಗಿರಿಗೆ ಬದಲಾಯಿಸಲಿದ್ದಾರೆ.

Advertisement

ಸಿದ್ದರಾಮಯ್ಯ ಅವರು ಈ ಹಿಂದೆ ಐದು ವರ್ಷಗಳ ಕಾಲ “ಕಾವೇರಿ’ಯನ್ನೇ ಅಧಿಕೃತ ನಿವಾಸವನ್ನಾಗಿಸಿಕೊಂಡಿದ್ದರು. ಆ ಬಳಿಕ ಮೈತ್ರಿ ಸರಕಾರದ ಅವಧಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾಗಲೂ ಕಾವೇರಿಯಲ್ಲೇ ವಾಸ್ತವ್ಯ ನಡೆಸಿದ್ದರು. ಆಪರೇಷನ್‌ ಕಮಲದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈಗಿರುವ ರೇಸ್‌ ಕೋರ್ಸ್‌ ರಸ್ತೆ ನಿವಾಸಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅದೇ ರೀತಿ ಸಚಿವರ ನಿವಾಸವೂ ಬದಲಾಗಲಿದೆ. ವಾಸ್ತು ಹಾಗೂ ಈ ಹಿಂದಿನ ಲಾಭ-ನಷ್ಟಗಳ ಲೆಕ್ಕಾಚಾರ ಆಧರಿಸಿ ತಮ್ಮ ಇಷ್ಟದ ನಿವಾಸಕ್ಕೆ ಶನಿವಾರದಿಂದಲೇ ಸಚಿವರ ಲಾಬಿ ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next