Advertisement

ಕಾಪು‌ ಮಯೂರ ಹೊಟೇಲ್ ಮಾಲಕ ಸಂತೋಷ್ ಆರ್.‌ ಶೆಟ್ಟಿ ವಿಧಿವಶ

03:23 PM Sep 28, 2021 | Team Udayavani |

ಕಾಪು: ಕಳತ್ತೂರು ಬರ್ಪಾಣಿ ದಿ. ರಘುರಾಮ ಶೆಟ್ಟಿ ಅವರ ಪುತ್ರ, ಕಾಪು ಮಯೂರ ಹೊಟೇಲ್ ನ ಮಾಲಕ ಸಂತೋಷ್ ಆರ್.‌ ಶೆಟ್ಟಿ (51) ಅವರು ಸೆ. 28ರಂದು ಅನಾರೋಗ್ಯದಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ನಾಲ್ಕು ಮಂದಿ ಸಹೋದರ – ಮೂರು‌ ಮಂದಿ ಸಹೋದರಿಯರನ್ನು ಮತ್ತು ಅಪಾರ ಬಂಧು ವರ್ಗದವರನ್ನು‌ ಅಗಲಿದ್ದಾರೆ.

ಹೊಟೇಲು ಉದ್ಯಮಿಯಾಗಿ ಕಳೆದ 27 ವರ್ಷಗಳಿಂದ ಮಯೂರಾ ಹೊಟೇಲ್ ನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದ ಅವರು,  ಸಮಾಜ ಸೇವಾಸಕ್ತರಾಗಿದ್ದು ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕೊರೊನಾ ಲಾಕ್ ಡೌನ್ ಸಂದರ್ಭಗಳಲ್ಲಿ ಸಮಾಜದ ಬಡ ವರ್ಗದ ಜನರ ನೋವಿಗೆ ಸ್ಪಂಧಿಸಿ ವಿವಿಧ ಸಹಕಾರ‌ ನೀಡಿದ್ದ ಅವರು ತನ್ನ ಹೊಟೇಲ್ ನ ಸಿಬಂದಿಗಳು ಮತ್ತು ಅವರ ಕುಟುಂಬದದವರ ಕಷ್ಟದ ಪರಿಸ್ಥಿತಿಯನ್ನು ನೋಡಿ ಅವರಿಗೆ ಪಡಿತರ ಕಿಟ್ ಮತ್ತು ಆರ್ಥಿಕ ಧನಸಹಾಯ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು.

ಗಣ್ಯರ ಸಂತಾಪ : ಹೊಟೇಲು ಉದ್ಯಮಿ ಸಂತೋಷ್ ಆರ್.‌ ಶೆಟ್ಟಿ ಅವರ ನಿಧನಕ್ಕೆ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರು, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ, ಯಶಪಾಲ್ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ನವೀನ್ ಚಂದ್ರ ಶೆಟ್ಟಿ ಸಹಿತ ಹಲವು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

ಇಂದು ರಾತ್ರಿ ಅಂತ್ಯಕ್ರಿಯೆ : ಮೃತ ಸಂತೋಷ್ ಶೆಟ್ಟಿ ಅವರ ಅಂತ್ಯ ಸಂಸ್ಕಾರವು ಇಂದು (ಸೆ.28) ರಾತ್ರಿ 8.30 ಕ್ಕೆ ಕಳತ್ತೂರು ಮಯೂರ ಹೌಸ್ ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next