Advertisement

ವಿಶ್ವ ಸಾಗರ ದಿನದ ಪ್ರಯುಕ್ತ ಕಾಪು ಬೀಚ್ ಸ್ವಚ್ಚತಾ ಕಾರ್ಯಕ್ರಮ

03:25 PM Jun 08, 2022 | Team Udayavani |

ಕಾಪು : ವಿಶ್ವ ಸಾಗರಗಳ ದಿನದ ಅಂಗವಾಗಿ ಕಾಪು‌ ಪುರಸಭೆ, ಟಿಪ್ಸ್ ಸೆಷನ್ಸ್, ಕಾಪು ಬೀಚ್ ನಿರ್ವಹಣಾ ಸಮಿತಿ, ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಇವರ ಸಹಯೋಗದಲ್ಲಿ ಬುಧವಾರ ಕಾಪು ಬೀಚ್ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮಾತನಾಡಿ, ಕರಾವಳಿಯ ಬೀಚ್‌ಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬೀಚ್ ಸ್ವಚ್ಚವಾಗಿದ್ದರೆ ಮಾತ್ರಾ ಸುಂದರತೆಯು ಶೋಭಿಸಲು ಸಾಧ್ಯವಿದೆ. ವಿಶ್ವಸಾಗರ ದಿನದ ಅಂಗವಾಗಿ ಸಾಂಕೇತಿಕವಾಗಿ ಕಾಪುವಿನಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಾಗರ ದಿನವನ್ನು ಸಾಗರ ದಡದಲ್ಲಿ ಆಚರಿಸಿದರಷ್ಟೇ ಮಹತ್ವ ಸಿಗುತ್ತದೆ. ಅದಕ್ಕೆ ಪೂರಕವಾಗಿ ಟಿಪ್ಸ್ ಸೆಷನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಬೀಚ್ ಸ್ಚಚ್ಚತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಇದನ್ನೂ ಓದಿ : ತಮಿಳುನಾಡು ಭಾರತ ಸರ್ಕಾರಕ್ಕೆ ಸೂಚನೆ ನೀಡುವಂತಿಲ್ಲ: ಸಿಎಂ ಬೊಮ್ಮಾಯಿ

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಪುರಸಭಾ ಸದಸ್ಯರಾದ ರತ್ನಕರ ಶೆಟ್ಟಿ, ನಿತಿನ್, ಸರಿತಾ ಪೂಜಾರಿ,ಶೋಭಾ ಬಂಗೇರ, ನೂರುದ್ದೀನ್, ವಿದ್ಯಲತಾ, ನವೀನ್ ಅಮೀನ್, ಟಿಪ್ಸ್ ಸಂಸ್ಥೆಯ ಶರತ್, ಜಾನ್ ರತ್ನಾಕರ್, ಸಂಪತ್, ಗಣೇಶ್, ಪುರಸಭೆ ಆರೋಗ್ಯಾಧಿಕಾರಿ ದಿನೇಶ್ ಕುಮಾರ್, ಪರಿಸರ ಇಂಜಿನಿಯರ್ ರವಿಶಂಕರ್, ಕಾಪು ಮೊಗವೀರ ಮಹಾಸಭಾದ ಅಧ್ಯಕ್ಷ ಕುಶ ಸಾಲ್ಯಾನ್, ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ನ ಲಾಲಾಜಿ ಪುತ್ರನ್, ಸಂತೋಷ್ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next