Advertisement

“ಬಿಗ್‌ ಬಿ’ಶೋ: ದ್ಯುತಿ ಕಣ್ಣೀರು

12:21 PM Nov 03, 2019 | Team Udayavani |

ಹೊಸದಿಲ್ಲಿ: ಬಾಲಿವುಡ್‌ ದಿಗ್ಗಜ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ರಿಯಾಲಿಟಿ ಶೋ “ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಖ್ಯಾತ ಆ್ಯತ್ಲೀಟ್‌ ದ್ಯುತಿ ಚಂದ್‌ ಬದುಕಿನ ಹಿನ್ನೆಲೆ ಎಲ್ಲರಿಗೂ ಕಣ್ಣೀರು ತರಿಸಿದೆ.

Advertisement

ತಾನು ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟ ದಿನಗಳಲ್ಲಿ ಕಂಡಿದ್ದ ಕಡು ಬಡತನ, ಪೌಷ್ಠಿಕಾಂಶಯುಕ್ತ ಆಹಾರವಿರದ ದಿನಗಳನ್ನು ನೆನೆದು ದ್ಯುತಿ ಕಣ್ಣೀರಾದರು. ಈ ವೇಳೆ ಮಾತನಾಡಿದ ದ್ಯುತಿ “ಮಾರುಕಟ್ಟೆಯಲ್ಲಿ ಬಳಸದೆ ಉಳಿಸಿದ್ದ ತರಕಾರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೆ’ ಎಂದು ನೆನಪಿಸಿಕೊಂಡಾಗ ಸ್ಟುಡಿಯೋದಲ್ಲಿ ತುಂಬಿದ್ದ ಜನರು ಭಾವುಕರಾದರು.

ಈ ಶೋದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌, ಆ್ಯತ್ಲೀಟ್‌ ಹಿಮಾ ದಾಸ್‌ ಇದ್ದರು. ಮೂವರು ಕ್ರೀಡಾ ತಾರೆಯರನ್ನು ಒಳಗೊಂಡಿದ್ದ ತಂಡ 12.50 ಲಕ್ಷ ರೂ. ಗೆದ್ದಿತು.

Advertisement

Udayavani is now on Telegram. Click here to join our channel and stay updated with the latest news.

Next