Advertisement

ಕಾಟಿಪಳ್ಳ: ವಿದ್ಯಾರ್ಥಿಗಳ ರಕ್ಷಾಬಂಧನವನ್ನು ತುಂಡರಿಸಿ ಹಾಕಿದ ಚರ್ಚ್ ಶಾಲೆ!

09:52 AM Aug 12, 2022 | Team Udayavani |

ಸುರತ್ಕಲ್: ಇಲ್ಲಿನ ಕಾಟಿಪಾಳ್ಳದಲ್ಲಿರುವ ಚರ್ಚ್ ಶಾಲೆಯೊಂದರಲ್ಲಿ ರಕ್ಷಾಬಂಧನವನ್ನು ಕಟ್ಟಿಕೊಂಡು ಬಂದ ವಿದ್ಯಾರ್ಥಿಗಳ ರಕ್ಷಾಬಂಧನವನ್ನು ತುಂಡರಿಸಿ ಹಾಕಿದ ಘಟನೆ ಗುರುವಾರ ನಡೆದಿದೆ.

Advertisement

ಹಿಂದೂ ಸಮುದಾಯದ ಈ ಆಚರಣೆಗೆ ಅವಮಾನ ಮಾಡಿದ ಚರ್ಚ್ ಶಾಲೆಯ ವಿರುದ್ಧ ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಶಾಲೆಯ ಮುಂದೆ ಜಮಾಯಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಘಟನೆ ನಡೆದಿತ್ತು.

ಇದನ್ನೂ ಓದಿ:ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಬಿ.ಸಿ.ನಾಗೇಶ್?: ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಚಿವ

ಹಿಂದೂ ಸಂಘಟನೆಯ ಪ್ರಮುಖರು ಕೂಡ ಶಾಲೆಯ ವರ್ತನೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸುಖಾಂತ್ಯ: ಪೋಷಕರು- ಹಿಂದೂ ಸಮಾಜದ ಪ್ರಮುಖರು ಶಾಲೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿದರು. ಶಾಲಾ ಆಡಳಿತ ಮಂಡಳಿ ಘಟನೆಯ ಕುರಿತಂತೆ ಕ್ಷಮೆ ಕೇಳಿದ್ದು, ಪ್ರಕರಣ ಸುಖಾಂತ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next